ADVERTISEMENT

ಚಿಕ್ಕಮಗಳೂರು: ಆಲ್ದೂರು ಹೋಬಳಿಯಲ್ಲಿ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 14:01 IST
Last Updated 23 ಜುಲೈ 2023, 14:01 IST
ಭಾರಿ ಮಳೆಗೆ ಬಿರಂಜಿ ಹಳ್ಳದ ನೀರು ಗದ್ದೆ ತೋಟಗಳಿಗೆ ನುಗ್ಗಿದೆ
ಭಾರಿ ಮಳೆಗೆ ಬಿರಂಜಿ ಹಳ್ಳದ ನೀರು ಗದ್ದೆ ತೋಟಗಳಿಗೆ ನುಗ್ಗಿದೆ   

ಆಲ್ದೂರು: ಎರಡು ದಿನಗಳಿಂದ ಆಲ್ದೂರು ಹೋಬಳಿಯ ಹಲಸಿಗೆ, ತೋರಣ ಮಾವು, ಕಠಾರದಳ್ಳಿ, ಗುಡ್ಡದೂರು, ಹೊಸಳ್ಳಿ, ಆಲ್ದೂರು, ಬನ್ನೂರು, ಗುಲ್ಲನ್ ಪೇಟೆಯಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದೆ.

ಯಲಗುಡಿಗೆ ಅರವಿಂದ್ ಬಿ.ಎಂ. ಮಾತನಾಡಿ ಆಲ್ದೂರು ಹೋಬಳಿಗೆ ಇದುವರೆಗೆ 114 ಸೆಂ.ಮೀ ಮಳೆಯಾಗಿದ್ದು, ಮಳೆಯ ಅಬ್ಬರ ಇನ್ನೂ ಕೆಲವು ದಿನ ಇರುವುದರಿಂದ ಶಾಲೆ, ಕಾಲೇಜಿಗೆ ಜಿಲ್ಲಾಧಿಕಾರಿ ರಜೆ ನೀಡಬೇಕು ಎಂದು ಒತ್ತಾಯಿಸಿದರು.

ಕಾಫಿ ಬೆಳೆಗಾರ ರವಿಕುಮಾರ್ ಎಚ್.ಎಲ್. ಮಾತನಾಡಿ, ಪುಷ್ಯ ಮಳೆ ಇದಾಗಿದ್ದು, ಈ ಮಳೆಯಿಂದ ತೇವಾಂಶ ಹೆಚ್ಚಾಗಿ ಕಾಳು ಮೆಣಸು ಬೆಳೆಗಾರರಿಗೆ ಅನುಕೂಲ ಆಗಲಿದೆ. ಕಾಫಿ ಗಿಡಗಳಲ್ಲಿ ಬೋರರ್ ಕಾಯಿಲೆ ಕಾಣಿಸಿಕೊಳ್ಳುವುದಿಲ್ಲ ಎಂದರು.

ADVERTISEMENT
ಬಿರಂಜಿ ಹಳ್ಳ ತುಂಬಿ ಹರಿಯುತ್ತಿರುವುದು
ಬಿರಂಜಿ ಹಳ್ಳ ತುಂಬಿ ಹರಿಯುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.