ಕೊಟ್ಟಿಗೆಹಾರ: ಚಾರ್ಮಾಡಿ ಹಳ್ಳಿ ಮನೆಯೊಂದರ ಬಳಿ ಕಾಳಿಂಗ ಸರ್ಪ ಹಾಗೂ ಎರಡು ತಲೆ ಹಾವನ್ನು ಸೆರೆ ಹಿಡಿದು ಸಂರಕ್ಷಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಚಾರ್ಮಾಡಿಯ ಮನೆಯೊಂದರ ಬಳಿ ಓಡಾಡುತ್ತಿದ್ದ ಕಾಳಿಂಗ ಸರ್ಪ ಹಾಗೂ ಎರಡು ತಲೆ ಹಾವನ್ನು ಉಜಿರೆಯ ಉರಗಪ್ರೇಮಿ ಸ್ನೇಕ್ ಜಾಯ್ ಸೆರೆ ಹಿಡಿದು ಚಾರ್ಮಾಡಿಯ ಅರಣ್ಯಕ್ಕೆ ಬಿಟ್ಟರು. ಈವರೆಗೆ ಅವರು ಏಳೂವರೆ ಸಾವಿರ ಹಾವುಗಳನ್ನು ಸೆರೆ ಹಿಡಿದು ಸುರಕ್ಷಿತ ಅರಣ್ಯಕ್ಕೆ ಬಿಟ್ಟಿರುವುದಾಗಿ ಸ್ನೇಕ್ ಜಾಯ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.