ADVERTISEMENT

ಚಿಕ್ಕಮಗಳೂರು | ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆ–ಗಾಳಿ ಆರ್ಭಟ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 6:41 IST
Last Updated 6 ಆಗಸ್ಟ್ 2020, 6:41 IST
ಚಿಕ್ಕಮಗಳೂರು ಜಿಲ್ಲೆ ಕಳಸ ಬಳಿಯ ಸಂಸೆ–ಬಾಳ್ಗಲ್‌ನಲ್ಲಿ ಮನೆ ಮೇಲೆ ಮರ ಬಿದ್ದು ಚಾವಣಿ ಕುಸಿದಿದೆ.
ಚಿಕ್ಕಮಗಳೂರು ಜಿಲ್ಲೆ ಕಳಸ ಬಳಿಯ ಸಂಸೆ–ಬಾಳ್ಗಲ್‌ನಲ್ಲಿ ಮನೆ ಮೇಲೆ ಮರ ಬಿದ್ದು ಚಾವಣಿ ಕುಸಿದಿದೆ.    

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ–ಗಾಳಿ ಆರ್ಭಟ ಮುಂದುವರಿದಿದೆ. ಮೂಡಿಗೆರೆಯಲ್ಲಿ ಟ್ಯಾಕ್ಸಿ ನಿಲ್ದಾಣದ ಚಾವಣಿ ಕುಸಿದಿದೆ. ಶಿಕ್ಷಕ ಶಾಂತಕುಮಾರ್ ಅವರ ಕಾರಿನ ಮೇಲೆ ತೆಂಗಿನ ಮರ ಬಿದ್ದು ಜಖಂಗೊಂಡಿದೆ.

ಕೊಪ್ಪ– ಜಯಪುರ ಮಾರ್ಗದಲ್ಲಿ ಕಲ್ಕೆರೆಯ ಬಳಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಜಯಪುರ– ಶೃಂಗೇರಿ ಮಾರ್ಗದಲ್ಲಿ ಮರ ಉರುಳಿದೆ.

ಮಳೆಯಿಂದಾಗಿ ಚಾರ್ಮಾಡಿ ಘಾಟಿ ಮಾರ್ಗದ ಆರನೇ ತಿರುವಿನ ಬಳಿ ಬಂಡೆಗಳು ರಸ್ತೆಗೆ ಉರುಳಿವೆ. ಕೊಟ್ಟಿಗೆಹಾರದಲ್ಲಿ 38.5 ಸೆಂ. ಮೀ ಮಳೆಯಾಗಿದೆ.

ADVERTISEMENT

ಕಳಸ ಬಳಿ ಸಂಸೆ–ಬಾಳ್ಗಲ್‌ನಲ್ಲಿ ಮನೆ ಮೇಲೆ ಮರ ಬಿದ್ದಿದೆ. ಚಾವಣಿ ಕುಸಿದಿದೆ. ಚನ್ನಹಡ್ಲುವಿನಲ್ಲಿ ಗುಡ್ಡದ ಮಣ್ಣು ರಸ್ತೆಗೆ ಮಣ್ಣು ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.