ADVERTISEMENT

ಮತಾಂತರದ ಬಗ್ಗೆ ಗಾಂಧೀಜಿ ಹೇಳಿದ್ದನ್ನ ಸಿದ್ದರಾಮಯ್ಯ ತಿಳಿದುಕೊಳ್ಳಲಿ: ಸಿಟಿ ರವಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 7:21 IST
Last Updated 17 ಡಿಸೆಂಬರ್ 2021, 7:21 IST
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ   

ಚಿಕ್ಕಮಗಳೂರು: ' ಮತಾಂತರದ ಬಗ್ಗೆ ಗಾಂಧೀಜಿ ಏನು ಹೇಳಿದ್ದರು ಎಂಬುದನ್ನು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಅಧ್ಯಯನ ಮಾಡಲಿ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 'ಮತಾಂತರ ದೇಶಾಂತರಕ್ಕೆ ಸಮ ಎಂದು ಗಾಂಧೀಜಿ ಹೇಳಿದ್ದರು. ಕಾಂಗ್ರೆಸ್ ನವರು ನಮ್ಮದು ಗಾಂಧೀಜಿ ಹಿಂದುತ್ವ ಎಂದು ಹೇಳುತ್ತಾರೆ. ಗಾಂಧೀಜಿ ಮತಾಂತರದ ಬಗ್ಗೆ ಹೇಳಿದ್ದನ್ನು ಅವರು ತಿಳಿದುಕೊಳ್ಳಬೇಕು' ಎಂದರು.

'ಹಿಂದೂಗಳು ಮುಸ್ಲಿಮರಾಗಿ ಪರಿವರ್ತನೆಯಾದರೆ ಅಲ್ಲಿ ಅಂಬೇಡ್ಕರ್, ಬುದ್ಧ ಯಾರಿಗೂ ಜಾಗ ಇರಲ್ಲ. ಮತಾಂತರ ನಿಷೇಧ ಕಾಯ್ದೆಯಲ್ಲಿ ಮೂಲ ಸಂಸ್ಕೃತಿ, ನಂಬಿಕೆ ಬದಲಾವಣೆಗೆ ಅವಕಾಶ ಇಲ್ಲ. ಮತಾಂತರ ಮತಗಳಿಕೆಯ ಸಾಧನವಲ್ಲ' ಎಂದರು.

ADVERTISEMENT

ಕಾಯ್ದೆಯಲ್ಲಿ ಬೌದ್ಧ, ಜೈನ, ಸಿಖ್ ಯಾವುದಕ್ಕೂ ನಿಬಂಧನೆ ಇಲ್ಲ. ಹಿಂದೂ ಇದ್ದವ ಬೌದ್ಧ ಆಗಬಹುದು, ಬೌದ್ಧ ಇದ್ದವ ವೈಷ್ಣವ ಆಗಬಹುದು' ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.