ಚಿಕ್ಕಮಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ.
ನಗರ ಉಂಡೇದಾಸರಹಳ್ಳಿಯ ಸೇಂಟ್ ಮೇರಿ ಶಾಲೆಯ ಎಸ್.ತೇಜಶ್ರೀ, ಗಣ್ಯ.ವಿ.ಕಾರಭಾರಿ, ಜ್ಯೋತಿನಗರದ ಸೇಂಟ್ ಜೋಸೆಫ್ ಶಾಲೆಯ ಎಚ್.ಎಂ.ಹರ್ಷಿತಾ, ತಾಲ್ಲೂಕಿನ ಕಡಬಗೆರೆಯ ಜ್ಯೋತಿರ್ವಿಕಾಸ್ ಆಂಗ್ಲ ಮಾಧ್ಯಮ ಶಾಲೆಯ ಎನ್.ಆರ್.ರಂಜಿತಾ, ಕಳಸ ತಾಲ್ಲೂಕಿನ ಶ್ರೀಜಗದೀಶ್ವರ ಆಂಗ್ಲ ಮಾಧ್ಯಮ ಶಾಲೆಯ ಕೆ.ವಿ.ಆದ್ಯಾ, ಡಿ.ಎ.ಪವನ್ ಶೆಣೈ ಹಾಗೂ ಕೊಪ್ಪ ತಾಲ್ಲೂಕಿನ ಹುಲುಮಕ್ಕಿಯ ಶ್ರೀವೆಂಕಟೇಶ್ವರ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯ ಪಿ.ಮಾನ್ಯಶ್ರೀ ಸಾಧನೆ ಮರೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಫಲಿತಾಂಶ: 25,702 ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆಯಲ್ಲಿ ಶೇ 100
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.