ADVERTISEMENT

ತರೀಕೆರೆ: ಧುಮ್ಮಿಕ್ಕುತ್ತಿದೆ ಕಲ್ಲತ್ತಿಗಿರಿ ಜಲಪಾತ, ಪ್ರವಾಸಿಗರ ರಕ್ಷಣೆ  

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 12:02 IST
Last Updated 6 ಆಗಸ್ಟ್ 2019, 12:02 IST
   

ಚಿಕ್ಕಮಗಳೂರು: ಮಳೆಯ ಆರ್ಭಟಕ್ಕೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕಲ್ಲತ್ತಿಗಿರಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ, ಜಲಪಾತದ ಅಂಗಳದ ವೀರಭದ್ರೇಶ್ವರ ಸ್ವಾಮಿ ದೇಗುಲದಲ್ಲಿ ಸಿಲುಕಿಕೊಂಡಿದ್ದ ಪ್ರವಾಸಿಗರನ್ನು ಪೊಲೀಸರು, ಸ್ಥಳೀಯರು ರಕ್ಷಿಸಿದ್ದಾರೆ.

ಜಲಪಾತದ ಭೋರ್ಗರೆತ ರಭಸ ಜೋರಾಗಿ ದಡಕ್ಕೆ ದಾಟಲಾಗದೆ ಸುಮಾರು 35 ಮಂದಿ ದೇಗುಲದಲ್ಲಿ ಸಿಲುಕಿಕೊಂಡಿದ್ದರು. ಪೊಲೀಸರು ಮತ್ತು ಸ್ಥಳೀಯರು ವೈರ್ ಹಗ್ಗದ ನೆರವಿನಿಂದ ಅವರನ್ನು ಪಾರು ಮಾಡಿದ್ದಾರೆ.

ಮಧ್ಯಾಹ್ನ 1.30 ರಿಂದ ಸುಮಾರು 2 ಗಂಟೆ ಕಾರ್ಯಾಚರಣೆ ಮಾಡಿದೆವು. ಸ್ಥಳೀಯ ಆಟೋ ಚಾಲಕರು ನೆರವಾದರು. ಎಲ್ಲರನ್ನು ಸುರಕ್ಷಿತವಾಗಿ ಕರೆತರಲಾಗಿದೆ' ಎಂದು ಲಿಂಗದಹಳ್ಳಿ ಠಾಣೆ ಪಿಎಸ್ಐ ಬಸವರಾಜಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.