ADVERTISEMENT

ಹಿರಿಯೂರು: ಟೈರ್ ಸಿಡಿದು ಹೊತ್ತಿ ಉರಿದ ಕಂಟೇನರ್ ಲಾರಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 15:35 IST
Last Updated 10 ಫೆಬ್ರುವರಿ 2024, 15:35 IST
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಶನಿವಾರ ಮುಂಜಾನೆ ಟೈರ್ ಸಿಡಿದ ಪರಿಣಾಮ ಹೊತ್ತಿ ಉರಿದ ಕಂಟೇನರ್ ಲಾರಿ
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಶನಿವಾರ ಮುಂಜಾನೆ ಟೈರ್ ಸಿಡಿದ ಪರಿಣಾಮ ಹೊತ್ತಿ ಉರಿದ ಕಂಟೇನರ್ ಲಾರಿ   

ಹಿರಿಯೂರು: ಸೂರತ್‌ನಿಂದ ತಮಿಳುನಾಡಿಗೆ ಬಟ್ಟೆ ತಯಾರಿಸುವ ದಾರ ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್ ಲಾರಿಯೊಂದರ ಟೈರ್ ಸಿಡಿದು ಬೆಂಕಿ ಹತ್ತಿಕೊಂಡು ಅಪಾರ ಹಾನಿಯಾಗಿರುವ ಘಟನೆ ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಶನಿವಾರ ಮುಂಜಾನೆ ನಡೆದಿದೆ.

ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ವ್ಯಾಪಿಸುವುದನ್ನು ನಿಯಂತ್ರಿಸುವ ವೇಳೆಗೆ ₹ 40 ಲಕ್ಷ ಮೌಲ್ಯದ ಬಟ್ಟೆದಾರ ಹಾಗೂ ₹ 26 ಲಕ್ಷ ಮೌಲ್ಯದ ಲಾರಿ ಸುಟ್ಟು ಹೋಗಿದೆ.

ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಕಾಳಿಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.