ಹಿರಿಯೂರಿನ ಬೆಸ್ಕಾಂ ಕಾಲೊನಿಯಲ್ಲಿ ಬೆಸ್ಕಾಂ ನೌಕರರಿಗೆ ₹3.80 ಕೋಟಿ ವೆಚ್ಚದಲ್ಲಿ 8 ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಶನಿವಾರ ಭೂಮಿಪೂಜೆ ನೆರವೇರಿಸಿದರು.
ಹಿರಿಯೂರು: ನಗರದ ಬೆಸ್ಕಾಂ ಕಾಲೋನಿಯಲ್ಲಿ ಶನಿವಾರ ಬೆಸ್ಕಾಂ ನೌಕರರಿಗೆ 3.80 ಕೋಟಿ ವೆಚ್ಚದಲ್ಲಿ 8 ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭೂಮಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬೆಸ್ಕಾಂ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ಡಿ ಸುತಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಳಾದ ಎಚ್. ಪೀರ್ ಸಾಬ್, ಜಿ. ತಿಮ್ಮರಾಯಪ್ಪ, ಸಹಾಯಕ ಎಂಜಿನಿಯರ್ ಗಳಾದ ಎಸ್. ಶಿವಪ್ಪ, ಟಿ. ಹರೀಶ್, ವಿ.ತಿಪ್ಪೇಸ್ವಾಮಿ, ಕೆ.ಎಸ್. ಗಿರೀಶ್, ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಸದಸ್ಯೆ ಶಿವರಂಜನಿ, ಮುಖಂಡರಾದ ಖಾದಿ ರಮೇಶ್, ಕಂದಿಕೆರೆ ಸುರೇಶ್ ಬಾಬು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.