ADVERTISEMENT

ಹಿರಿಯೂರು | ಚಲಿಸುತ್ತಿದ್ದ ಬಸ್ ಬೆಂಕಿಗೆ ಆಹುತಿ, ಒಂದೇ ಕುಟುಂಬದ ಐವರು ದಹನ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 17:51 IST
Last Updated 12 ಆಗಸ್ಟ್ 2020, 17:51 IST
ಸಂಪೂರ್ಣ ಸುಟ್ಟು ಕರಕಲಾಗಿರುವ ಬಸ್
ಸಂಪೂರ್ಣ ಸುಟ್ಟು ಕರಕಲಾಗಿರುವ ಬಸ್   

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಕೆ.ಆರ್‌.ಹಳ್ಳಿ ಗೇಟ್‌ ಬಳಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್‌ಗೆ ಬುಧವಾರ ನಸುಕಿನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದು ವಿಜಯಪುರದ ಒಂದೇ ಕುಟುಂಬದ ಐವರು ದಹನವಾಗಿದ್ದಾರೆ.

ಅಲ್ಲಿನ ಗಣೇಶ ನಗರದ ನಿವಾಸಿ ಶೀಲಾ ರವಿ (33), ಪುತ್ರಿ ಸ್ಪರ್ಶ (8), ಪುತ್ರ ಸಮೃದ್ಧ (5), ಸಹೋದರಿ ಕವಿತಾ ವಿನಾಯಕ (29), ಇವರ ಪುತ್ರಿ ನಿಶ್ಚಿತಾ (3) ಮೃತಪಟ್ಟವರು.

ಬೆಂಗಳೂರಿನ ರಾಜಾಜಿನಗರದ ಮನ್ಸೂರ್‌ ಪಟೇಲ್‌, ವಿಜಯಪುರ ಇಎಸ್‌ಐ ಆಸ್ಪತ್ರೆ ವೈದ್ಯ ಡಾ.ಪಾಂಡುರಂಗ ಚೌವಾಣ್‌, ಬಸವರಾಜ್ ಹಾಗೂ ಪ್ರಶಾಂತ್ ಗಾಯಗೊಂಡಿದ್ದು, ಹಿರಿಯೂರು ಮತ್ತು ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.