ADVERTISEMENT

ಮೊಳಕಾಲ್ಮುರು | ಕ್ರಿಕೆಟ್‌ ಟೂರ್ನಿ: ರಾಯಲ್‌ ರೇಂಜರ್ಸ್‌ ತಂಡ ಪ್ರಥಮ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2025, 16:16 IST
Last Updated 20 ಏಪ್ರಿಲ್ 2025, 16:16 IST
ಮೊಳಕಾಲ್ಮುರು ತಾಲ್ಲೂಕಿನ ಕೊಮ್ಮನಪಟ್ಟಿಯಲ್ಲಿ ನಡೆದ ಎಂಪಿಎಲ್‌ ಸೀಜನ್-02‌ ಕ್ರಿಕೆಟ್‌ ಪಂದ್ಯಾವಳಿ ವಿಜೇತರಿಗೆ ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ಡಿ. ಮಂಜುನಾಥ್‌ ಬಹುಮಾನ ವಿತರಿಸಿದರು.
ಮೊಳಕಾಲ್ಮುರು ತಾಲ್ಲೂಕಿನ ಕೊಮ್ಮನಪಟ್ಟಿಯಲ್ಲಿ ನಡೆದ ಎಂಪಿಎಲ್‌ ಸೀಜನ್-02‌ ಕ್ರಿಕೆಟ್‌ ಪಂದ್ಯಾವಳಿ ವಿಜೇತರಿಗೆ ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ಡಿ. ಮಂಜುನಾಥ್‌ ಬಹುಮಾನ ವಿತರಿಸಿದರು.   

ಮೊಳಕಾಲ್ಮುರು: ತಾಲ್ಲೂಕಿನ ಕೊಮ್ಮನಪಟ್ಟಿಯಲ್ಲಿ ಸ್ಥಳೀಯ ರಾಕರ್ಸ್‌ ತಂಡದಿಂದ 6 ದಿನಗಳು ಹಮ್ಮಿಕೊಂಡಿದ್ದ ಮೊಳಕಾಲ್ಮುರು ಪ್ರೀಮಿಯರ್‌ ಲೀಗ್‌ (ಎಂಪಿಎಲ್)‌ ಟೂರ್ನಿ ಶನಿವಾರ ಮುಕ್ತಾಯಗೊಂಡಿತು.

ಐಪಿಎಲ್‌ ಮಾದರಿಯಲ್ಲಿ ಹಮ್ಮಿಕೊಂಡಿದ್ದ ಟೂರ್ನಿಯಲ್ಲಿ ಮ್ಯಾಸರಹಟ್ಟಿಯ ರಾಯಲ್‌ ರೇಂಜರ್ಸ್‌ ಪ್ರಥಮ (₹ 30,000 ಮತ್ತು ಪಾರಿತೋಷಕ), ಹಾನಗಲ್‌ನ ಡ್ರಾಗನ್‌ ರೈಡರ್ಸ್‌ ತಂಡ ದ್ವಿತೀಯ (₹ 20,000  ಪಾರಿತೋಷಕ), ತಳವಾರಹಳ್ಳಿಯ ಅಂಜೇವರ್ಸ್‌ ತಂಡ ತೃತೀಯ (₹ 10,000 ಮತ್ತು ಪಾರಿತೋಷಕ) ಬಹುಮಾನ ಪಡೆದವು.

ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಡಿ. ಮಂಜುನಾಥ್‌ ಬಹುಮಾನ ವಿತರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.