ಹೊಸದುರ್ಗ: ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಮತ್ತು ಎಐಟಿಯುಸಿ ಸದಸ್ಯರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
‘₹21,000 ಕನಿಷ್ಟ ವೇತನ, ಕೆಲಸದ ಭದ್ರತೆ, ತಮಿಳುನಾಡು ಮಾದರಿಯಲ್ಲಿ ವಿವಿಧ ಸೌಲಭ್ಯ, ಮಾಸಿಕ ₹3,000 ನಿವೃತ್ತಿ ವೇತನ, ಪ್ರತಿ ವರ್ಷ ಸಮವಸ್ತ್ರ, ದಸರಾ ರಜೆ, ಬೇಸಿಗೆ ರಜೆಯಲ್ಲಿ ವೇತನ ಪಾವತಿ, ಬಿಸಿಯೂಟ ತಯಾರಕರು ನಿಧನರಾದಲ್ಲಿ ₹2 ಲಕ್ಷ ಪರಿಹಾರ, ಅಂತ್ಯಕ್ರಿಯೆಗೆ ₹20,000 ನೀಡಬೇಕು’ ಎಂಬುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಎಐಟಿಯುಸಿ ಅಧ್ಯಕ್ಷ ಕುಮಾರಸ್ವಾಮಿ ಎನ್.ಸಿ, ಶಿವಮ್ಮ, ಕಾರ್ಯದರ್ಶಿ ವಸಂತಬಾಯಿ, ಬಿಸಿಯೂಟ ಮುಖ್ಯ ಅಡುಗೆಯವರು ಮತ್ತು ಸಹಾಯಕಿಯರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.