ಚಿಕ್ಕಜಾಜೂರು: ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಫಲಿತಾಂಶದಲ್ಲಿ ಚಿಕ್ಕಜಾಜೂರು ಸಮೀಪದ ಪಾಡಿಗಟ್ಟೆ ಗ್ರಾಮದ ಚೈತನ್ಯ ಪರಮಶಿವಂ 88ನೇ ರ್ಯಾಂಕ್ ಪಡೆದಿದ್ದಾರೆ.
ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ್ದ ಚೈನತ್ಯ ಪರಮಶಿವಂ, ಬೆಂಗಳೂರಿನ ನಾರಾಯಣ ಶಿಕ್ಷಣ ಸಂಸ್ಥೆಯಲ್ಲಿ ಜೆಇಇ ತರಬೇತಿ ಪಡೆದಿದ್ದರು.
ಕಳೆದ ವಾರ ಪ್ರಕಟಗೊಂಡ ಸಿಇಟಿ ಫಲಿತಾಂಶದಲ್ಲಿ ಚೈತನ್ಯ 9ನೇ ರ್ಯಾಂಕ್ ಪಡೆದಿದ್ದರು ಎಂದು ಸ್ನೇಹಿತರಾದ ಪಿ.ಟಿ. ಈಶ್ವರಪ್ಪ, ನಟರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.