ADVERTISEMENT

ಗೊಲ್ಲಹಳ್ಳಿಯ ವ್ಯಕ್ತಿಗೆ ಕೋವಿಡ್‌

ಸ್ವಗ್ರಾಮಕ್ಕೆ ಮರಳಿದ್ದ ಬೆಂಗಳೂರಿನ ವಿಕಾಸಸೌಧದಲ್ಲಿ ನರೇಗಾ ಕೇಸ್‌ ವರ್ಕರ್‌

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 13:30 IST
Last Updated 8 ಜುಲೈ 2020, 13:30 IST

ಹಿರಿಯೂರು:ತಾಲ್ಲೂಕಿನ ಗೊಲ್ಲಹಳ್ಳಿಯ ನಿವಾಸಿ, ಬೆಂಗಳೂರಿನ ವಿಕಾಸಸೌಧದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ವಿಭಾಗದ ಕೇಸ್ ವರ್ಕರ್ ಆಗಿರುವ 44 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ಬುಧವಾರ ದೃಢಪಟ್ಟಿದೆ. ಇದರೊಂದಿಗೆ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ 26ಕ್ಕೇರಿದೆ.

ಜುಲೈ 7ರಂದು ಬೆಂಗಳೂರಿನಿಂದ ಗೊಲ್ಲಹಳ್ಳಿಗೆ ಬಂದಿದ್ದ ಸೋಂಕಿತ, ಕೋವಿಡ್–19 ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಅಂದು ಸಂಜೆಯೇ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ಬೆಳಿಗ್ಗೆಬಂದಿರುವ ವರದಿಯಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ.

‘ಸೋಂಕಿತರ 62 ವರ್ಷದ ತಾಯಿ, 12 ಮತ್ತು 8 ವರ್ಷದ ಮಕ್ಕಳಿಬ್ಬರ ಸ್ವ್ಯಾಬ್ ಅನ್ನು ಸಂಗ್ರಹಿಸಲಾಗಿದ್ದು, ವರದಿ ಬರಬೇಕಿದೆ. ಬುಧವಾರ 31 ವರ್ಷದ ಪತ್ನಿ, 36 ವರ್ಷದ ಸಹೋದರ, 35 ವರ್ಷದ ಸಹೋದರನ ಪತ್ನಿ ಹಾಗೂ 10 ವರ್ಷದ ಅವರ ಮಗನ ಸ್ವ್ಯಾಬ್ ಸಂಗ್ರಹಿಸಿದ್ದೇವೆ’ ಎಂದು ಡಾ. ವೆಂಕಟೇಶ್ ತಿಳಿಸಿದ್ದಾರೆ.

ADVERTISEMENT

ಸೋಂಕಿತ ವ್ಯಕ್ತಿ ಬೆಂಗಳೂರಿನ ಯಲಹಂಕ ಸಮೀಪದ ಲಕ್ಷ್ಮಯ್ಯ ಗಾರ್ಡನ್ ಬಡಾವಣೆಯಲ್ಲಿ ನೆಲೆಸಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.