ADVERTISEMENT

ಮಂಗಳೂರು: ಲೇಡಿಹಿಲ್‌ನಲ್ಲಿ ನಾರಾಯಣ ಗುರು ವೃತ್ತದ ಫಲಕ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 3:38 IST
Last Updated 24 ಸೆಪ್ಟೆಂಬರ್ 2020, 3:38 IST
ಮಂಗಳೂರಿನ ಲೇಡಿಹಿಲ್‌ ವೃತ್ತದಲ್ಲಿ ನಾರಾಯಣಗುರು ವೃತ್ತದ ಫಲಕ ಅಳವಡಿಸಿರುವುದು.
ಮಂಗಳೂರಿನ ಲೇಡಿಹಿಲ್‌ ವೃತ್ತದಲ್ಲಿ ನಾರಾಯಣಗುರು ವೃತ್ತದ ಫಲಕ ಅಳವಡಿಸಿರುವುದು.   

ಮಂಗಳೂರು: ನಗರದ ಲೇಡಿಹಿಲ್‌ ವೃತ್ತದ ನಾಮಕರಣ ವಿಷಯ ಕಗ್ಗಂಟಾಗುತ್ತಿರುವ ಸಂದರ್ಭದಲ್ಲಿ ಬುಧವಾರ ಸಂಜೆ ಬಜರಂಗ ದಳದ ಧ್ವಜವನ್ನು ಹೊಂದಿ ‘ನಾರಾಯಣ ಗುರು ವೃತ್ತ’ ನಾಮಫಲಕವನ್ನು ಅಳವಡಿಸಲಾಗಿತ್ತು. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ನಾಮಕರಣ ವಿಷಯದ ಕುರಿತು ಪರ–ವಿರೋಧ ಚರ್ಚೆ ನಡೆಯುತ್ತಿದೆ. ಪಾಲಿಕೆಯಿಂದ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ಏಕಾಏಕಿ ವೃತ್ತದ ಮಧ್ಯದಲ್ಲಿ ಫಲಕ ಅಳವಡಿಸಲಾಗಿದೆ. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೊಲೀಸರು, ಸ್ಥಳಕ್ಕೆ ಬಂದು ಫಲಕ ತೆರವು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT