ADVERTISEMENT

ಕೃಷ್ಣಮೃಗದ ಚರ್ಮ ಸಾಗಾಟ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 16:30 IST
Last Updated 16 ಜೂನ್ 2019, 16:30 IST

ಮಂಗಳೂರು: ಕೃಷ್ಣಮೃಗದ ಚರ್ಮವನ್ನು ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದ್ದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ರೂಗಿಯ ಮೇಶ್ ಮಲ್ಲಪ್ಪ ಯಾದವಾಡ್ ಮತ್ತು ರಾಜು ಬಿರಾದಾರ್ ಎಂಬವರನ್ನು ನಗರ ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

ತಣ್ಣೀರುಬಾವಿ ಬಳಿಯ ಕಸಬಾ ಬೇಂಗ್ರೆಯ ಕೂಳೂರಿನ ಕುದುರೆಮುಖ ಜಂಕ್ಷನ್ ಬಳಿ ಗೋಣಿ ಚೀಲ ಹಿಡಿದುಕೊಂಡಿದ್ದ ಆರೋಪಿಗಳು, ಪೊಲೀಸ್ ಜೀಪು ಕಂಡೊಡನೆ ಪರಾರಿಯಾಗಲು ಯತ್ನಿಸಿದ್ದರು. ಆದರೆ, ಅವರನ್ನು ಹಿಡಿದು ಗೋಣಿಚೀಲ ಪರಿಶೀಲಿಸಿದಾಗ ಅಕ್ಕಿಯೊಳಗೆ ಕೃಷ್ಣಮೃಗದ ಚರ್ಮ ಇಟ್ಟಿರುವುದು ಪತ್ತೆಯಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT