ಮಂಗಳೂರು: ಪಡಿತರ ಪಡೆಯಲು ಬುಧವಾರ ಬೆಳಿಗ್ಗೆಯಿಂದ ನಗರದ ನ್ಯಾಯಬೆಲೆ ಅಂಗಡಿಗಳ ಎದುರು ಜನರು ಸರದಿಯಲ್ಲಿ ನಿಂತಿದ್ದರು.
ನಗರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದ ಶಾಸಕ ವೇದವ್ಯಾಸ ಕಾಮತ್, ಎಲ್ಲರಿಗೂ ಪಡಿತರ ವಿತರಣೆಗೆ ಸೂಚನೆ ನೀಡಿದರು.
VIDEOನೋಡಿ: ಲಾಕ್ಡೌನ್ ನಡುವೆ ಮಂಗಳೂರಲ್ಲಿ ಅದ್ಧೂರಿ ಮದುವೆ: ವಿಡಿಯೊ ವೈರಲ್
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಹಾರ ಹಾಗೂ ಪೊಲೀಸ್ ಇಲಾಖೆ ಜೊತೆ ಸಭೆ ನಡೆಸಲಾಗಿದೆ. ದಿನಕ್ಕೆ 150-200 ಜನರಿಗೆ ಪಡಿತರ ವಿತರಿಸಲು ಸೂಚಿಸಲಾಗಿದೆ. ಬೆಳಿಗ್ಗೆ 6 ರಿಂದ 10 ಗಂಟೆಯ ವರೆಗೆ ಪಡಿತರ ತೆಗೆದುಕೊಂಡು ಹೋಗಬಹುದು. 10 ಗಂಟೆಯ ನಂತರ ಪಡಿತರ ತೆಗೆದುಕೊಂಡು ಹೋಗುವವರಿಗೆ ಯಾವುದೇ ತೊಂದರೆ ಮಾಡದಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ತೊಂದರೆ ಆದಲ್ಲಿ ನನ್ನನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.