ADVERTISEMENT

ವಿದ್ಯಾರ್ಥಿನಿ ಶಿಕ್ಷಣಕ್ಕೆ ನೆರವಾದ ಕೃಷಿಕ

ಐ.ಎಲ್.ಪಿಂಟೋ ಕಾರ್ಯಕ್ಕೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 6:21 IST
Last Updated 26 ಸೆಪ್ಟೆಂಬರ್ 2020, 6:21 IST
ಐ.ಎಲ್.ಪಿಂಟೋ ಅವರು ಮದ್ದಡ್ಕದ ವಿದ್ಯಾರ್ಥಿನಿ ಜಸೀದಾ ಭಾನು ಅವರಿಗೆ ನೋಟ್‌ಬುಕ್ ಮತ್ತು ಇತರ ಪರಿಕರಗಳನ್ನು ನೀಡಿದರು.
ಐ.ಎಲ್.ಪಿಂಟೋ ಅವರು ಮದ್ದಡ್ಕದ ವಿದ್ಯಾರ್ಥಿನಿ ಜಸೀದಾ ಭಾನು ಅವರಿಗೆ ನೋಟ್‌ಬುಕ್ ಮತ್ತು ಇತರ ಪರಿಕರಗಳನ್ನು ನೀಡಿದರು.   

ಬೆಳ್ತಂಗಡಿ: ಇಲ್ಲಿನ ಕೊಯ್ಯೂರು ಗ್ರಾಮದ ಕೊಪ್ಪದಬೈಲಿನ ಕೃಷಿಕ, ಸಾಮಾಜಿಕ ಕಾರ್ಯಕರ್ತ ಐ.ಎಲ್. ಪಿಂಟೋ ಅವರು ತಮ್ಮ ಕೃಷಿ ಆದಾಯದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಿ ಮಾದರಿಯಾಗಿದ್ದಾರೆ.

ಶೈಕ್ಷಣಿಕ ಚಟುವಟಿಕೆ ಮುಂದುವರಿಸಲು ಆರ್ಥಿಕ ತೊಂದರೆ ಎದುರಿಸುತ್ತಿದ್ದ ಮದ್ದಡ್ಕದ ವಿದ್ಯಾರ್ಥಿನಿ ಜಸೀದಾ ಭಾನು ಅವರಿಗೆ ದ್ವಿತೀಯ ಪಿಯುಸಿ ವಿಧ್ಯಾಭ್ಯಾಸ ಕ್ಕಾಗಿ ಎಲ್ಲ ಪುಸ್ತಕಗಳು ಮತ್ತು ಇತರ ಪರಿಕರಗಳನ್ನು ಕೊಡುಗೆ ನೀಡಿದರು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೈಗೊಳ್ಳಲಾದ ನೂತನ ಮೀಟಿಂಗ್ ಹಾಲ್ ಕೆಲಸಕ್ಕೆ ಮೇಲ್ಛಾವಣಿ ನಿರ್ಮಾಣಕ್ಕೆ 25 ಸಾವಿರ ರೂ.ಗಳನ್ನೂ ದೇಣಿಗೆಯಾಗಿ ನೀಡಿದ್ದಾರೆ.

10 ಅಂಗವಿಕಲ ಮಕ್ಕಳಿಗೆ ಆರ್ಥಿಕ ನೆರವು ನೀಡಿರುವ ಅವರು, ಸಾಧನೆಗೈದ ವಿದ್ಯಾರ್ಥಿಗಳ ಮನೆಗೇ ಹೋಗಿ ನೆರವಾಗುತ್ತಾರೆ. 15ಕ್ಕಿಂತ ಹೆಚ್ಚು ಮಕ್ಕಳಿಗೆ ಶಾಲಾ ಶುಲ್ಕ, ನೋಟ್‌ಬುಕ್ ನೀಡಿದ್ದಾರೆ. ಕೋವಿಡ್-19 ಲಾಕ್‌ಡೌನ್‌ ಸಂದರ್ಭದಲ್ಲಿ ಕೊಯ್ಯೂರು, ಮಲೆಬೆಟ್ಟು ಸುತ್ತಮುತ್ತ 100 ಬಡ ಕುಟುಂಬಗಳಿಗೆ ಆಹಾರ ಮತ್ತು ಅಗತ್ಯ ವಸ್ತುಗಳ ಕಿಟ್ ವಿತರಿಸುವ ಮೂಲಕ ಅವರು ಸೇವೆ ಸಲ್ಲಿಸಿದ್ದರು. ಪೊಲೀಸ್ ಠಾಣೆಯ ಸಭಾಭವನದ ಚಾವಣಿ ನಿರ್ಮಾಣಕ್ಕೆ ₹ 25ಸಾವಿರ ದೇಣಿಗೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.