ಉಳ್ಳಾಲ: ಬೆಳ್ಮ ಬೆರಿಕೆ ಸೇವಾ ಭಾವ ಚಾರಿಟೇಬಲ್ ಟ್ರಸ್ಟ್ನ ಸೇವಾಶ್ರಮದ ದಶಮಾನೋತ್ಸವ ಪ್ರಯುಕ್ತ ಆರೋಗ್ಯ ಶಿಬಿರ ಹಾಗೂ ಆಶ್ರಮ ಕಟ್ಟಡದ ಶಿಲಾನ್ಯಾಸ ಸಮಾರಂಭಇದೇ 21ರಂದು ಜರಗಲಿದೆ ಎಂದು ಟ್ರಸ್ಟಿ ಡಾ ಜಿ.ಆರ್ ಶೆಟ್ಟಿ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆರೋಗ್ಯ ಶಿಬಿರ ಬೆಳಿಗ್ಗೆಯಿಂದ ನಡೆಯಲಿದ್ದು ಶಿಲಾನ್ಯಾಸ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಸೇವಾಶ್ರಮವ ದಾನಿಗಳ ಸಹಕಾರದೊಂದಿಗೆ ನಿರ್ಗತಿಕ ಮಹಿಳೆಯರ ಆರೈಕೆ ನಡೆಸುತ್ತಿದೆ. ಪುರುಷರಿಗಾಗಿ ನೂತನ ಕಟ್ಟಡ ಕಟ್ಟಲು ಟ್ರಸ್ಟ್ ಮುಂದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಫಾ.ವೆಲೆರಿಯನ್, ಕರ್ಣಾಟಕ ಬ್ಯಾಂಕ್ ಸಿಇಒ ಮಹಾಬಲೇಶ್ವರ್ ಎಂ.ಎಸ್, ಶಾಸಕ ಯು.ಟಿ ಖಾದರ್, ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಬೆಳ್ಮ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಸತ್ತಾರ್, ಮುಂಡ್ಕೂ ರಾಮದಾಸ ಕಾಮತ್, ಸುನೀಲ್ ರಾಜು ಸಾಲ್ಯಾನ್, ಲಯನ್ಸ್ ಕ್ಲಬ್ನ ಸಂಜಿತ್, ಕಣಚೂರು ಸಂಸ್ಥೆ ಅಧ್ಯಕ್ಷ ಯು.ಕೆ ಮೋನು, ಗೀತಾಪ್ರಕಾಶ್ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಟ್ರಸ್ಟ್ನ ಯಶವಂತ ಪೂಜಾರಿ, ಹರೀಶ್ ಆಳ್ವ ಹಾಗೂ ಬಾಲಕೃಷ್ಣ ಪೂಜಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.