ADVERTISEMENT

Mangaluru Rains | ಮೂಲ್ಕಿ: ಬಪ್ಪನಾಡು ದೇವಸ್ಥಾನ ಜಲಾವೃತ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 8:28 IST
Last Updated 6 ಜುಲೈ 2023, 8:28 IST
   

ಮೂಲ್ಕಿ: ಭಾರಿ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಪ್ರದೇಶದಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಇಲ್ಲಿನ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನವು ಗುರುವಾರ ಜಲಾವೃತಗೊಂಡಿದೆ.

ಕೊಡಿ ಮರ ಇರುವ ದೇವಸ್ಥಾನದ ಹೊರಗಿನ ಸುತ್ತನ್ನು ದಾಟಿ ಬಂದಿರುವ ಮಳೆ ನೀರು ಗರ್ಭಗುಡಿ ಇರುವ ಸುತ್ತನ್ನೂ ಆವರಿಸಿದೆ. ಗರ್ಭಗುಡಿಯ ಮೆಟ್ಟಿಲುಗಳು ಮುಳುಗಿವೆ. ತೀರ್ಥ ಮಂಟಪವಿರುವ ಪ್ರದೇಶದಲ್ಲಿ ಎರಡು ಅಡಿಗಳಿಗೂ ಹೆಚ್ಚು ನೀರು ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT