ಪ್ರಾತಿನಿಧಿಕ ಚಿತ್ರ
ಸುಳ್ಯ: ಜಾಲ್ಸೂರು ಗ್ರಾಮದ ಪಂಚಾಯಿತಿ ಉಪಾಧ್ಯಕ್ಷೆ ತಿರುಮಲೇಶ್ವರಿ ಅರ್ಭಡ್ಕ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಸಹಿ ಹಾಕಿದ ಆರು ಮಂದಿ ಸದಸ್ಯರು ಸಭೆಗೆ ಗೈರಾಗಿದ್ದರಿಂದ ತಿರುಮೇಶ್ವರಿ ಅವರು ಉಪಾಧ್ಯಕ್ಷ ಸ್ಥಾನ ಉಳಿಸಿಕೊಂಡಿದ್ದಾರೆ.
ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ಜಾಲ್ಸೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅವಿಶ್ವಾಸ ಗೊತ್ತುವಳಿ ಸಭೆ ಶನಿವಾರ ನಿಗದಿಯಾಗಿತ್ತು.
17 ಮಂದಿ ಪಂಚಾಯಿತಿ ಸದಸ್ಯರಲ್ಲಿ 7 ಮಂದಿ ಮಾತ್ರ ಸಭೆಗೆ ಬಂದಿದ್ದರು. ಅವಿಶ್ವಾಸಕ್ಕೆ ಸಹಿ ಹಾಕಿದ 6 ಮಂದಿ ಹಾಗೂ ಸಹಿ ಹಾಕದ 4 ಮಂದಿ ಸಭೆಗೆ ಬಂದಿರಲಿಲ್ಲ. ಬೆಳಿಗ್ಗೆ 11ರಿಂದ 12ರವರೆಗೆ ಸದಸ್ಯರ ಹಾಜರಿಗಾಗಿ ಸಮಯ ನೀಡಲಾಗಿತ್ತು. 9 ಮಂದಿ ಮಾತ್ರ ಇದ್ದುದರಿಂದ ಕೋರಂ ಕೊರತೆಯ ಕಾರಣಕ್ಕೆ ಸಭೆಯನ್ನೇ ರದ್ದು ಮಾಡಲಾಯಿತು.
ನಿಯಮದ ಪ್ರಕಾರ 17 ಮಂದಿ ಸದಸ್ಯರ ಪೈಕಿ 12 ಮಂದಿ ಸದಸ್ಯರು ಸಭೆಯಲ್ಲಿ ಹಾಜರಿದ್ದರೆ ಮಾತ್ರ ಸಭೆ ನಡೆಯುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.