ಮಂಗಳೂರು: ನಗರ ಹೊರವಲಯದ ವಾಮಂಜೂರಿನ ತಿರುವೈಲಿನಲ್ಲಿ ಗುತ್ತಿನ ಕಂಬಳಕ್ಕೆ ಶನಿವಾರ ಆರಂಭಗೊಂಡಿತು.
ವಾಮಂಜೂರು ತಿರುವೈಲುಗುತ್ತಿನ ಹೊನಲು ಬೆಳಕಿನ ‘ಸಂಕುಪೂಂಜ- ದೇವುಪೂಂಜ’ ಜೋಡುಕರೆ ಬಯಲು ಕಂಬಳವು ಅದ್ದೂರಿಯಾಗಿ ಬಿರುಸಿನಿಂದ ನಡೆಯುತ್ತಿದೆ.
ಕೋವಿಡ್ ಪರಿಣಾಮ ಈ ಬಾರಿ ಕಂಬಳ ವಿಳಂಬವಾಗಿ ಆರಂಭಗೊಂಡಿದ್ದು, ಬಂಟ್ವಾಳ ತಾಲ್ಲೂಕಿನ ಹೊಕ್ಕಾಡಿಗೋಳಿಯ ‘ವೀರ-ವಿಕ್ರಮ’ ಜೋಡುಕರೆ ಕಂಬಳ, ಐಕಳದ ‘ಕಾಂತಬಾರೆ– ಬೂದಬಾರೆ’ ಕಂಬಳದ ಬಳಿಕ ಇದೀಗ ಈ ಋತುವಿನ ಮೂರನೇ ಕಂಬಳ ತಿರುವೈಲು ಗುತ್ತಿನಲ್ಲಿ ‘ಸಂಕುಪೂಂಜ- ದೇವುಪೂಂಜ’ ಹೆಸರಲ್ಲಿ ನಡೆಯುತ್ತಿದೆ.
ವಾಮಂಜೂರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದ ಎದುರಿನ ತಿರುವೈಲು ಗುತ್ತಿನಲ್ಲಿ ಕಂಬಳ ನಡೆಯುತ್ತಿದೆ. ಕಂಬಳದಲ್ಲಿ 150ಕ್ಕೂ ಹೆಚ್ಚು ಕೋಣಗಳ ಜತೆ ಭಾಗವಹಿಸಿದ್ದು, ಕರಾವಳಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಗಣೇಶ್ ರಾವ್ ಚಾಲನೆ ನೀಡಿದರು. ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಮುಖಂಡ ಮಿಥುನ್ ರೈ ಮತ್ತಿತರ ಪ್ರಮುಖರು ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.