ADVERTISEMENT

ಮಂಗಳೂರು: ಕೊರಗಜ್ಜ ದೇವಸ್ಥಾನದ ಹುಂಡಿಲಿ ಬಳಸಿದ ಕಾಂಡೋಮ್ ಹಾಕಿದ್ದವ ಬಂಧನ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 16:21 IST
Last Updated 30 ಡಿಸೆಂಬರ್ 2021, 16:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ನಗರದ ನಂದಿಗುಡ್ಡೆಯ ಕೊರಗಜ್ಜನ ಕಟ್ಟೆಗೆ, ಬಳಸಿದ ಕಾಂಡೋಮ್‌ ಹಾಕಿ ಅಪವಿತ್ರಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ಬುಧವಾರ ಬಂಧಿಸಿದ್ದಾರೆ.

ದೇವದಾಸ್‌ ದೇಸಾಯಿ (62) ಬಂಧಿತ ಆರೋಪಿ. ಹುಬ್ಬಳ್ಳಿಯ ಉಣಕಲ್‌ ಮೂಲದ ದೇವದಾಸ್‌, ಕಳೆದ ಹಲವು ವರ್ಷಗಳಿಂದ ಮಂಗಳೂರಿನ ಕೋಟೆಕಾರ್‌ನಲ್ಲಿ ನೆಲೆಸಿದ್ದು, ಆಟೊ ಓಡಿಸುವುದೂ ಸೇರಿದಂತೆ ಬೇರೆಬೇರೆ ಕೆಲಸಗಳನ್ನು ಮಾಡಿಕೊಂಡಿದ್ದರು.

ಕೊರಗಜ್ಜನ ಕಟ್ಟೆ ಮಾತ್ರವಲ್ಲದೆ ನಗರದ ಬೇರೆಬೇರೆ ಧರ್ಮೀಯರ, 18 ಧಾರ್ಮಿಕ ಕ್ಷೇತ್ರಗಳಲ್ಲಿ ಇಂಥ ಕೃತ್ಯ ನಡೆಸಿರುವುದಲ್ಲದೆ, ಇಂಥ ಕಡೆಗಳಲ್ಲೆಲ್ಲ ಏಸುವನ್ನು ಕುರಿತ ಲೇಖನಗಳನ್ನೂ ಹಾಕಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ‍ಪೊಲೀಸರು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆಆರೋಪಿಗಳನ್ನು ಬಂಧಿಸಲುವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.