ಬಂಟ್ವಾಳ: ‘ಧರ್ಮಸಭೆಯಲ್ಲಿ ಒಗ್ಗೂಡಿ ಮುನ್ನಡೆಯಲು ಲೊರೆಟ್ಟೊ ಮಾತೆ ಅನುಗ್ರಹ ಸದಾ ನಮ್ಮೊಂದಿಗಿರಬೇಕು’ ಎಂದು ಮೂಡುಬಿದಿರೆ ಪಾಲಡ್ಕ ಚರ್ಚ್ನ ಧರ್ಮಗುರು ಎಲ್ಯಾಸ್ ಡಿಸೋಜ ಹೇಳಿದರು.
ಇಲ್ಲಿನ ಲೊರೆಟ್ಟೋ ಮಾತಾ ಚರ್ಚ್ನಲ್ಲಿ ಶುಕ್ರವಾರ ನಡೆದ ಮಾತೆ ಮರಿಯಮ್ಮ ಹಬ್ಬದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಧರ್ಮಕ್ಷೇತ್ರದ ಧರ್ಮಗುರುಗಳ ಜತೆಗೆ ಪವಿತ್ರ ಬಲಿ ಪೂಜೆ ನೆರವೇರಿಸಿ, ನೊವೆನಾ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಫ್ರಾನ್ಸಿಸ್ ಕ್ರಾಸ್ತಾ ಕೃತಜ್ಞತೆ ಸಮರ್ಪಿಸಿದರು. ಮುಖ್ಯಶಿಕ್ಷಕ ಜೈಸನ್ ಮೋನಿಸ್, ವಲಯ ಪ್ರಧಾನ ಧರ್ಮಗುರು ವಲೇರಿಯನ್ ಡಿಸೋಜ, ಮಾಡುಬಿದಿರೆ ವಲಯ ಪ್ರಧಾನ ಧರ್ಮಗುರು ಪೌಲ್ ಸಿಕ್ವೇರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.