ADVERTISEMENT

ಮಂಗಳೂರು | ‘ವಿಸ್ಮಯ ಕೀಟ ಪ್ರಪಂಚ’ ಕೃತಿಗೆ ಮುಸ್ಲಿಂ ಸಾಹಿತ್ಯ ಪ್ರಶಸ್ತಿ

‘ಪ್ರಜಾವಾಣಿ’ ದೈನಿಕದ ‘ಸಹಪಾಠಿ’ ಪುರವಣಿಯಲ್ಲಿ ಪ್ರಕಟವಾಗುತ್ತಿದ್ದ ಬರಹ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 12:36 IST
Last Updated 5 ಡಿಸೆಂಬರ್ 2022, 12:36 IST
ವಿಸ್ಮಯ ಕೀಟ ಪ್ರಪಂಚ ಪುಸ್ತಕ
ವಿಸ್ಮಯ ಕೀಟ ಪ್ರಪಂಚ ಪುಸ್ತಕ   

ಮಂಗಳೂರು:ಕನ್ನಡದಲ್ಲಿ ಪ್ರಕಟಿತ, ಮುಸ್ಲಿಂ ಬರಹಗಾರರ ಅತ್ಯುತ್ತಮ ಕೃತಿಗೆ, ಕರ್ನಾಟಕ ಮುಸ್ಲಿಂ ಲೇಖಕರ ಸಂಘವು ಕೊಡಮಾಡುವ, 2021ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಂ ಸಾಹಿತ್ಯ ಪ್ರಶಸ್ತಿ’ಗೆ ಡಾ. ನೂರ್ ಸಮದ್ ಅಬ್ಬಲಗೆರೆಯವರ ‘ವಿಸ್ಮಯ ಕೀಟ ಪ್ರಪಂಚ’ ಕೃತಿ ಆಯ್ಕೆಯಾಗಿದೆ ಎಂದು ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ತಿಳಿಸಿದ್ದಾರೆ.

ಡಾ. ನೂರ್ ಸಮದ್ ಅವರು ನಾಲ್ಕು ವರ್ಷಗಳಿಂದ ಸ್ವತಃ ಛಾಯಾಗ್ರಹಣ ಮಾಡಿ, ಕೀಟಗಳನ್ನು ಕುರಿತ ವಿಸ್ಮಯದ ಲೇಖನಗಳನ್ನು ‘ಪ್ರಜಾವಾಣಿ’ ದೈನಿಕದ ‘ಸಹಪಾಠಿ’ ಪುರವಣಿಗೆ ಬರೆಯುತ್ತಿದ್ದರು. ಅದರ ಪುಸ್ತಕ ರೂಪವೇ ‘ವಿಸ್ಮಯ ಕೀಟ ಪ್ರಪಂಚ’ ಕೃತಿ.

ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ನೀಡಲಾಗುವ ಈ ಪ್ರಶಸ್ತಿಯು ₹10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. 2023ರ ಜನವರಿಯಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಉಮರ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.