ADVERTISEMENT

ಮಂಗಳೂರು | ಬೀದಿ ಬದಿ‌ ಅಂಗಡಿಗಳ‌ ತೆರವಿಗೆ ವಿರೋಧ: ವ್ಯಾಪಾರಸ್ಥರ ಧರಣಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 7:14 IST
Last Updated 30 ಜುಲೈ 2024, 7:14 IST
<div class="paragraphs"><p>ಮಹಾನಗರ ಪಾಲಿಕೆ ಆಯುಕ್ತರ ಕಚೇರಿ‌ ಎದುರು ಧರಣಿ ಕುಳಿತಿರುವ&nbsp;ವ್ಯಾಪಾರಸ್ಥರು</p></div>

ಮಹಾನಗರ ಪಾಲಿಕೆ ಆಯುಕ್ತರ ಕಚೇರಿ‌ ಎದುರು ಧರಣಿ ಕುಳಿತಿರುವ ವ್ಯಾಪಾರಸ್ಥರು

   

ಮಂಗಳೂರು: ಮಹಾನಗರ ಪಾಲಿಕೆ ನಡೆಸುತ್ತಿರುವ ಬೀದಿ ಬದಿ ಅಂಗಡಿಗಳ ತೆರವು 'ಟೈಗರ್' ಕಾರ್ಯಾಚರಣೆ ವಿರೋಧಿಸಿ ಬೀದಿ ಬದಿ ವ್ಯಾಪಾರಿಗಳು ಮಹಾನಗರ ಪಾಲಿಕೆ ಆಯುಕ್ತರ ಕಚೇರಿ‌ ಎದುರು ಧರಣಿ ಕುಳಿತಿದ್ದಾರೆ.

ಬೆಳಿಗ್ಗೆ 10.30ರಿಂದ ಧರಣಿ ಆರಂಭಿಸಿರುವ ಬೀದಿ ಬದಿ ವ್ಯಾಪಾರಿಗಳು, ಪಾಲಿಕೆ ಆಯುಕ್ತರು ಬಂದು ಸಮಸ್ಯೆ ಆಲಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಆರಂಭದಲ್ಲಿ ಪಾಲಿಕೆಯ ಕಾರಿಡಾರ್ ನಲ್ಲಿ ಕುಳಿತಿದ್ದ ಧರಣಿ ನಿರತರು, ಈಗ ಆಯುಕ್ತರ ಚೇಂಬರ್ ಎದುರು ಬಂದು ಕುಳಿತಿದ್ದಾರೆ. ಈ ನಡುವೆ ಕಚೇರಿ ಸಿಬ್ಬಂದಿ‌ ಮತ್ತು ಧರಣಿನಿರತರ‌ ನಡುವೆ ಮಾತಿನ ಚಕಮಕಿ ನಡೆಯಿತು.

ಆಯುಕ್ತರು ಜಿಲ್ಲಾಧಿಕಾರಿ‌ ಕಚೇರಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ಕಚೇರಿ ಸಿಬ್ಬಂದಿ ತಿಳಿಸಿದ್ದು, ಅವರು ಬರುವ ತನಕ‌ ಸ್ಥಳದಿಂದ ಕದಲುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ.

ಜಿಲ್ಲಾ ಬೀದಿ ಬದಿ ವ್ಯಾಪಾರ ಸ್ಥರ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್, ಸುನಿಲ್ ಬಜಾಲ್ ಧರಣಿಯ ನೇತೃತ್ವ ವಹಿಸಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.