ಕಡಬ(ಉಪ್ಪಿನಂಗಡಿ): ಕಡಬ ತಾಲ್ಲೂಕು ಪಾಲೋಳಿ ಜನಾರ್ದನ ಗೌಡ ಎಂಬವರ ಮನೆಗೆ ದಾಳಿ ನಡೆಸಿದ ಪೊಲೀಸರು ಪರವಾನಗಿ ಇಲ್ಲದ 2 ಪಿಸ್ತೂಲ್ ಮತ್ತು ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಕಡಬ ಸಬ್ ಇನ್ಸ್ಪೆಕ್ಟರ್ ರುಕ್ಮ ನಾಯ್ಕ್ ನೇತೃತ್ವದ ಪೊಲೀಸ್ ತಂಡವು ದಾಳಿ ನಡೆಸಿದ್ದು, ಮನೆಯಲ್ಲಿದ್ದ 2 ನಕಲಿ ಪಿಸ್ತೂಲ್ ಮತ್ತು 2 ಖಾಲಿ ತೋಟೆ, ರಂಜಕ, ಪೊಟ್ಯಾಶಿಯಂ, ಕೇಪು ಮೊದಲಾದ ಸ್ಪೋಟಕ ವಸ್ತಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಎ.ಎಸ್.ಐ. ಚಿದಾನಂದ ರೈ, ಸಿಬ್ಬಂದಿ ಸ್ಕರಿಯ, ಭವಿತ್ ರೈ, ಶ್ರೀಶೈಲ, ಮಹೇಶ್, ಜೀಪು ಚಾಲಕ ಕನಕರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.