ADVERTISEMENT

ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಉಕ್ಕಿ ಹರಿಯುತ್ತಿರುವ ಕುಮಾರಧಾರ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 6:37 IST
Last Updated 6 ಆಗಸ್ಟ್ 2019, 6:37 IST
   

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹರಿಯುತ್ತಿರುವ ಪುಣ್ಯ ನದಿ ಕುಮಾರಧಾರ ನೆರೆ ನೀರಿನಿಂದ ತುಂಬಿ ಹರಿಯುತಿದ್ದು ಭಕ್ತರು ತೀರ್ಥ ಸ್ನಾನ ನೆರವೇರಿಸುವ ಸ್ನಾನ ಘಟ್ಟ ಸಂಪೂರ್ಣ ನೆರೆಯಿಂದ ಮಂಗಳವಾರ ಮುಳುಗಡೆಗೊಂಡಿದೆ.

ಘಟ್ಟದ ಮೇಲೆ ಹಾಗೂ ಸ್ಥಳಿಯವಾಗಿ ಭಾರಿ ಮಳೆ ಆದ ಕಾರಣ ಇದೇ ಮೊದಲ ಭಾರಿಗೆ ಈ ವರ್ಷ ಮುಳುಗಡೆಗೊಂಡಿತು.

ನಾಗರ ಪಂಚಮಿ ದಿನದಿಂದ ಮಳೆ ಈ ಭಾಗದಲ್ಲಿ ವ್ಯಾಪಕಗೊಂಡಿದ್ದು ಪಂಚಮಿ ಮರು ದಿನವೇ ಕುಮಾರಾಧಾರ ನದಿಯಲ್ಲಿ ನೆರೆ ಅಪಾರ ಪ್ರಮಾಣದಲ್ಲಿ ಕಾಣಿಸಿಕೊಂಡು ಹರಿದಿದೆ.

ADVERTISEMENT

ನೆರೆಗೆ ಕೆಎಸ್ಎಸ್ ಕಾಲೇಜು ಹೊರತು ಪಡಿಸಿ ಇತೆರೆಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.