ADVERTISEMENT

ರಸ್ತೆಯಲ್ಲಿ ನಿಷೇಧಿತ ಪಿಎಫ್ಐ ಪರ ಬರಹ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 11:12 IST
Last Updated 4 ಅಕ್ಟೋಬರ್ 2022, 11:12 IST

ಮಂಗಳೂರು: ಬಂಟ್ವಾಳ ತಾಲ್ಲೂಕಿನ ಪಿಲಾತಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ಸಾರ್ವಜನಿಕ ‌ರಸ್ತೆಯ ಮೇಲೆ 'ಚಡ್ಡಿಗಳೇ ಎಚ್ಚರಿಕೆ- PFI ನಾವು ಮರಳಿ ಬರುತ್ತೇವೆ' ಎಂಬ ಬರಹ ಬರೆದಿರುವುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ನೈನಾಡು- ಗೋಳಿಯಂಗಡಿ ಕಡೆಗೆ ಹಾದು ಹೋಗುವ ಸಾರ್ವಜನಿಕ ಡಾಂಬರು ರಸ್ತೆಯಲ್ಲಿ ಯಾರೋ ಕಿಡಿಗೇಡಿಗಳು ಬಿಳಿ ಬಣ್ಣದ ಸ್ಪ್ರೇ ಪೇಂಟ್ ನಿಂದ ಈ ಬರಹ ಬರೆದಿದ್ದು, ಪುಂಜಾಲಕಟ್ಟೆ ಪಿಎಸ್ ಐ ಸುತೇಶ್ ಕೆಪಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT