ದಾವಣಗೆರೆ: ಜಿಲ್ಲೆಯಲ್ಲಿ 148 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಒಂದೇ ದಿನ 605 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ದಾವಣಗೆರೆ ತಾಲ್ಲೂಕಿನಲ್ಲಿ 55, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 28, ಹರಿಹರ ತಾಲ್ಲೂಕಿನಲ್ಲಿ 27, ಚನ್ನಗಿರಿ ತಾಲ್ಲೂಕಿನಲ್ಲಿ 23, ಜಗಳೂರು ತಾಲ್ಲೂಕಿನಲ್ಲಿ 12 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರಜಿಲ್ಲೆಯ ಮೂವರಿಗೆ ಕೊರೊನಾ ಬಂದಿದೆ.
ಜಿಲ್ಲೆಯಲ್ಲಿ ಈವರೆಗೆ 16,241 ಮಂದಿಗೆ ಕೊರೊನಾ ವೈರಸ್ ಸೋಂಕು ಬಂದಿದೆ. 13,453 ಮಂದಿ ಗುಣಮುಖರಾಗಿದ್ದಾರೆ. 241 ಮಂದಿ ಮೃತಪಟ್ಟಿದ್ದಾರೆ. 2,547 ಸಕ್ರಿಯ ಪ್ರಕರಣಗಳಿವೆ.
15 ಮಂದಿಗೆ ಸೋಂಕು
ಮಲೇಬೆನ್ನೂರು: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ 15 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಪಟ್ಟಣದ ಪುರುಷ, ಇಬ್ಬರು ಮಹಿಳೆಯರು, ಕುಂಬಳೂರಿನ ಇಬ್ಬರು ಪುರುಷರು, ಮಹಿಳೆ, ಜಿಗಳಿಯ ಪುರುಷ,ಮಹಿಳೆ, ನಂದಿತಾವರೆ, ಕಾಮಲಾಪುರದ ಇಬ್ಬರು ಪುರುಷರು, ನಂದಿಗುಡಿ, ಕೊಕ್ಕನೂರು, ನಿಟ್ಟೂರಿನ ತಲಾ ಒಬ್ಬ ಪುರುಷರಿಗೆ ಕೊರೊನಾ ಸೋಂಕು ತಗುಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.