ದಾವಣಗೆರೆ: ಬೆಳೆ ವಿಮೆ ಸಮೀಕ್ಷೆಯಲ್ಲಿ ಲೋಪವೆಸಗಿದ ನ್ಯಾಮತಿ ತಾಲ್ಲೂಕಿನ ಕುಂಕುವಾ ವೃತ್ತದ ಗ್ರಾಮ ಲೆಕ್ಕಿಗ ಪ್ರಶಾಂತ ಕುಮಾರ್ ಎಂ.ಎಸ್. ಅವರನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೋಮವಾರ ಅಮಾನತುಗೊಳಿಸಿದ್ದಾರೆ.
ತಾಲ್ಲೂಕಿನ ಕೂಗುನಹಳ್ಳಿ ಗ್ರಾಮದ ರೈತ ಚಂದ್ರಶೇಖರಪ್ಪ ಹಾಗೂ ರತ್ನಮ್ಮ ಅವರ ಜಮೀನುಗಳನ್ನು ತಪ್ಪಾಗಿ ನಮೂದಿಸಿದ್ದು, ಬೆಳೆ ಸಮೀಕ್ಷೆ ವೇಳೆ ಮೆಕ್ಕೆಜೋಳದ ಬದಲು ಅಡಿಕೆಯನ್ನು ನಮೂದಿಸಿದ್ದಾರೆ ಎಂದು ರೈತರು ದೂರು ನೀಡಿದ್ದರು. ಈ ಕುರಿತು ಹೊನ್ನಾಳಿ ಕೃಷಿ ಉಪ ನಿರ್ದೇಶಕ ಅವರು ಪರಿಶೀಲನೆ ನಡೆಸಿದ್ದರು.
ರೈತನ ಮನವಿಯ ಮೇರೆಗೆ ಬೆಳೆಯನ್ನು ನಮೂದು ಮಾಡಲಾಗಿದೆ ಎಂದು ಪ್ರಶಾಂತ ಕುಮಾರ್ ಮಾಹಿತಿ ನೀಡಿದ್ದರು. ಸೂಕ್ತ ಕ್ರಮ ಕೈಗೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ವರದಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಸರ್ಕಾರದ ಯೋಜನೆಯಲ್ಲಿ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಅಮಾನತು ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.