
ಪ್ರಜಾವಾಣಿ ವಾರ್ತೆ
ಪೊಲೀಸ್
ಸಾಂದರ್ಭಿಕ ಚಿತ್ರ
ದಾವಣಗೆರೆ: ತುಂಗಭದ್ರಾ ಬಡಾವಣೆಯ 2ನೇ ಹಂತದ ಮನೆಯೊಂದರ ಬೀಗ ಮುರಿದು ₹ 2.18 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
ಅಂಚೆ ಇಲಾಖೆ ಉದ್ಯೋಗಿ ಎಸ್.ಎನ್. ಮಲ್ಲಪ್ಪ ಎಂಬುವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ₹ 1.9 ಲಕ್ಷ ಮೌಲ್ಯದ 24 ಗ್ರಾಂ ಚಿನ್ನಾಭರಣ, ₹ 25,500 ಮೌಲ್ಯದ 425 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ ₹ 1,000 ನಗದು ಕಳವು ಮಾಡಲಾಗಿದೆ.
ಮಲ್ಲಪ್ಪ ಅವರು ಶನಿವಾರ ಕುಟುಂಬ ಸಮೇತ ಸಿಂಗ್ರಿಹಳ್ಳಿಗೆ ತೆರಳಿದ್ದರು. ಭಾನುವಾರ ಮನೆಗೆ ಮರಳಿದಾಗ ಕೃತ್ಯ ಗೊತ್ತಾಗಿದೆ. ಮನೆಯ ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಬೀರುವಿನಲ್ಲಿದ್ದ ಆಭರಣಗಳನ್ನು ಕಳವು ಮಾಡಿದ್ದಾರೆ. ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.