ADVERTISEMENT

ರಾಘವೇಂದ್ರರನ್ನು ಗೆಲ್ಲಿಸುವಂತೆ ಶಾಮನೂರು ಹೇಳಿಕೆ: ಒಳ್ಳೆಯ ಬೆಳವಣಿಗೆ –ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
<div class="paragraphs"><p>ಜಗದೀಶ ಶೆಟ್ಟರ್</p></div>

ಜಗದೀಶ ಶೆಟ್ಟರ್

   

ದಾವಣಗೆರೆ: ಶಿವಮೊಗ್ಗದ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಮತ್ತೆ ಗೆಲ್ಲಿಸುವಂತೆ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಹೇಳಿರುವುದು ಉತ್ತಮ ಬೆಳವಣಿಗೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅಭಿಪ್ರಾಯಪಟ್ಟರು.

‘ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿಯವರು ಗೆಲ್ಲಲಿ ಎಂದು ಹಾರೈಸಿರುವುದು ಒಳ್ಳೆಯದೇ ಆಯಿತು. ನಾನು ಕೆಲವು ಘಟನೆಗಳಿಂದ ಬೇಸರಗೊಂಡು ಹಿಂದೆ ಬಿಜೆಪಿ ತೊರೆದಿದ್ದೆ. ಕಾಂಗ್ರೆಸ್‌ಗೆ ಸೇರಿದಾಗ ಆಗಲಿ, ಹೊರಬಂದಿರುವುದರಿಂದ ಯಾವುದೇ ಪಾಪಪ್ರಜ್ಞೆಯಾಗಲೀ ಅಥವಾ ಪಶ್ಚಾತ್ತಾಪವಾಗಲೀ ಇಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.