ADVERTISEMENT

Lokayukta Raid | ದಾವಣಗೆರೆ: ಇಬ್ಬರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 4:50 IST
Last Updated 14 ಅಕ್ಟೋಬರ್ 2025, 4:50 IST
<div class="paragraphs"><p>ಜಗದೀಶ ನಾಯ್ಕ ಹಾಗೂ  ಬಿ.ಎಸ್.ನಡುವಿನಮನೆ</p></div>

ಜಗದೀಶ ನಾಯ್ಕ ಹಾಗೂ ಬಿ.ಎಸ್.ನಡುವಿನಮನೆ

   

ದಾವಣಗೆರೆ: ನಗರದಲ್ಲಿ ಮಂಗಳವಾರ ಬೆಳಿಗ್ಗೆ ಇಬ್ಬರು ಅಧಿಕಾರಿಗಳಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಕೆಆರ್ ಐಡಿಎಲ್ ಎಇಇ ಜಗದೀಶ ನಾಯ್ಕ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜೂನಿಯರ್‌ ಎಂಜಿನಿಯರ್ ಬಿ.ಎಸ್.ನಡುವಿನಮನೆ ಅವರ ನಿವಾಸ ಹಾಗೂ

ADVERTISEMENT

ಎಪಿಎಂಸಿ ಬಳಿ ಇರುವ ಉಗ್ರಾಣದ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ.

ನಗರದ ಸರಸ್ವತಿ ಬಡಾವಣೆಯಲ್ಲಿರುವ ಬಿ.ಎಸ್.ನಡುವಿನಮನೆ ಅವರ ಮನೆ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಚನ್ನಗಿರಿ ವಿಭಾಗದ ಕೆಆರ್ ಐಡಿಎಲ್ ಎಇಇ ಜಗದೀಶ ನಾಯ್ಕ ಅವರ ಕಚೇರಿ ಹಾಗೂ ಶಿವಮೊಗ್ಗ ಜಿಲ್ಲೆಯ ಮೂರು ಕಡೆಗಳಲ್ಲಿ ಜಗದೀಶ ನಾಯ್ಕ ಅವರಿಗೆ ಸೇರಿದ ಮೂರು ಮನೆಗಳ‌ ಮೇಲೆ ದಾಳಿ ನಡೆದಿದೆ.‌

ಲೋಕಾಯುಕ್ತ ಎಸ್ಪಿ‌ ಕೌಲಾಪೂರೆ ಭೇಟಿ ನೀಡಿ‌ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.