ADVERTISEMENT

ದಾವಣಗೆರೆ: ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ – ಮಹಿಳೆ ಸಹಿತ ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 4:36 IST
Last Updated 2 ಮಾರ್ಚ್ 2022, 4:36 IST
ದಾವಣಗೆರೆ ತಾಲ್ಲೂಕು ಆನಗೋಡು ಬಳಿಯ ಉಳುಪಿನಕಟ್ಟೆ ಬಳಿ ಲಾರಿ ಡಿಕ್ಕಿಯಾಗಿ ಪಲ್ಟಿಯಾಗಿರುವ ಟ್ರ್ಯಾಕ್ಟರ್‌
ದಾವಣಗೆರೆ ತಾಲ್ಲೂಕು ಆನಗೋಡು ಬಳಿಯ ಉಳುಪಿನಕಟ್ಟೆ ಬಳಿ ಲಾರಿ ಡಿಕ್ಕಿಯಾಗಿ ಪಲ್ಟಿಯಾಗಿರುವ ಟ್ರ್ಯಾಕ್ಟರ್‌   

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಆನಗೋಡು ಸಮೀಪದ ಉಳುಪಿನಕಟ್ಟೆ ಫ್ಲೈಓವರ್‌ನಲ್ಲಿ ಸೋಮವಾರ ರಾತ್ರಿ ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿಯಾಗಿ ಮಹಿಳೆ ಸಹಿತ ಮೂವರು ಮೃತಪಟ್ಟಿದ್ದಾರೆ.

ಟ್ರ್ಯಾಕ್ಟರ್‌ ಚಾಲಕ, ದಾವಣಗೆರೆ ತಾಲ್ಲೂಕಿನ ಹಾಲವರ್ತಿಯ ಎಚ್‌.ಬಿ. ಹನುಮಂತಪ್ಪ (40), ಟ್ರ್ಯಾಕ್ಟರ್‌ನಲ್ಲಿದ್ದ ಹಾಲವರ್ತಿಯ ಎಚ್‌.ಡಿ. ಕಿರಣ್‌ (34), ಲಾರಿ ಚಾಲಕನ ಪತ್ನಿ, ನಿಟುವಳ್ಳಿಯ ಅನ್ನಪೂರ್ಣಮ್ಮ (30) ಮೃತಪಟ್ಟವರು. ಹಾಲವರ್ತಿಯ ಬಸವರಾಜ ಮತ್ತು ರೇವಣಸಿದ್ಧಪ್ಪ ಗಾಯಗೊಂಡವರು.

ಟ್ರ್ಯಾಕ್ಟರ್‌ನಲ್ಲಿ ದಾವಣಗೆರೆಯಿಂದ ಪೈಪ್‌ಗಳನ್ನು ತುಂಬಿಸಿಕೊಂಡು ಹಾಲವರ್ತಿ ಕಡೆಗೆ ಹೋಗುತ್ತಿತ್ತು. ದಾವಣಗೆರೆಯಿಂದ ಬೆಂಗಳೂರು ಕಡೆಗೆ ನಿಟುವಳ್ಳಿ ಸಂತೋಷ್‌ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯು ಟ್ರ್ಯಾಕ್ಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಟ್ರ್ಯಾಕ್ಟರ್‌ ಪಲ್ಟಿಯಾಗಿದೆ. ಲಾರಿಯ ಎಡಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ADVERTISEMENT

ಅನ್ನಪೂರ್ಣಮ್ಮ ಅವರು ವಿಧಾನಸೌಧ ನೋಡಬೇಕು ಎಂದು ತನ್ನ ಪತಿ ಜತೆಗೆ ಲಾರಿಯಲ್ಲಿ ಹೊರಟಿದ್ದರು. ಈ ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿವೈಎಸ್‌ಪಿ ಬಸವರಾಜ್‌, ಗ್ರಾಮಾಂತರ ಪೊಲೀಸ್‌ ಠಾಣೆಯ ಪಿಎಸ್‌ಐ ನಿಂಗನಗೌಡ ನೆಗಳನೂರು, ಸಿಬ್ಬಂದಿ ಪ್ರಕಾಶ್‌, ರಂಗಸ್ವಾಮಿ, ಅಣ್ಣಯ್ಯ, ನೂರುಲ್ಲಾ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಟ್ರ್ಯಾಕ್ಟರ್‌ ಅನ್ನು ತೆಗಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.