ಮಾಯಕೊಂಡ: ಸಮೀಪದ ಹಿರೇತೊಗಲೇರಿ ಬಳಿ ಟೋಲ್ ಕೇಂದ್ರ ಮಾಡಿದರೆ ಹಲವು ಬಾರಿ ಸಂಚರಿಸುವ ರೈತರಿಗೆ, ವರ್ತಕರಿಗೆ ತೊಂದರೆಯಾಗುತ್ತದೆ ಎಂದು ಆರೋಪಿಸಿ ರೈತರು, ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ಈ ಕುರಿತು ಸ್ಥಳ ಪರಿಶೀಲನೆಗೆ ಬಂದಿದ್ದಎಂ.ಎಸ್.ವಿ ಕನ್ಸಲ್ಟೆನ್ಸಿಯ ಎಂಜಿನಿಯರ್ ಹಜರತ್ ಅಲಿ ಅವರಿಗೆ ಯಾವುದೇ ಕಾರಣಕ್ಕೂ ಇಲ್ಲಿ ಟೋಲ್ ಕೇಂದ್ರ ತೆರೆಯಬಾರದು ಎಂದು ಆಗ್ರಹಿಸಿದರು.
ಚನ್ನಗಿರಿ ಮತ್ತು ದಾವಣಗೆರೆ ತಾಲ್ಲೂಕು ಮಧ್ಯೆ ಮರಡಿ, ಕಂದಗಲ್ಲು ಭಾಗದಲ್ಲಿ ಟೋಲ್ ಕೇಂದ್ರ ನಿರ್ಮಿಸಿದರೆ ಅನುಕೂಲವಾಗುತ್ತದೆ. ಆಸ್ಪತ್ರೆ, ಬ್ಯಾಂಕ್ ಮತ್ತಿತರ ತುರ್ತು ಸಂದರ್ಭದಲ್ಲಿ ಪದೇ ಪದೇ ಶುಲ್ಕ ತೆರಬೇಕಾಗುತ್ತದೆಎಂದು ರಾಮಗೊಂಡನಹಳ್ಳಿ ರಾಜಶೇಖರ್, ಲೋಹಿತ್, ಮಹೇಂದ್ರ, ಅಣಬೇರು ಶಿವಮೂರ್ತಿ, ಅತ್ತಿಗೆರೆ ದೇವರಾಜ್, ಮಳಲಕೆರೆ ಸದಾನಂದ ಹೇಳಿದರು.
ಸ್ಥಳಕ್ಕೆ ಬಂದ ಶಾಸಕ ಪ್ರೊ.ಎನ್. ಲಿಂಗಣ್ಣ, ‘ದಾವಣಗೆರೆ ಹಿರೇತೊಗಲೇರಿಗೆ ತೀರಾ ಸಮೀಪ ಇವೆ. ಪದೇ ಪದೇ ಶುಲ್ಕ ತುಂಬಬೇಕಾಗುತ್ತದೆ. ಕೃಷಿ ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿ
ಗಳಿಗೆ ತೊಂದರೆಯಾಗುತ್ತದೆ’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಬಸವರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ಮುರುಗೇಶ್, ‘ಈ ಸಂಬಂಧ ಸಚಿವ ಗೋವಿಂದ ಕಾರಜೋಳ, ಸಂಸದ ಸಿದ್ದೇಶ್ವರ ಅವರಿಗೆ ಮನವಿ ಮಾಡಲಾಗಿದೆ’ ಎಂದರು. ಪಿಎಸ್ಐ ಲತಾ ತಾಳೇಕರ್, ಬಾಡಾ, ಅಣಬೇರು, ತೊಗಲೇರಿ ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.