ADVERTISEMENT

ವ್ಯಕ್ತಿತ್ವ ವಿಕಸನಗೊಳಿಸುವ ಜೆಸಿಐ: ಲತಾ ಮಲ್ಲಿಕಾರ್ಜುನ್‌

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 2:36 IST
Last Updated 27 ನವೆಂಬರ್ 2022, 2:36 IST
ಹರಪನಹಳ್ಳಿ ಜೆಸಿಐ ಸ್ಫೂರ್ತಿ ತಂಡ‌‌ವು ದಾವಣಗೆರೆಯ ಬಂಟರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ ( ಜೆಸಿಐ) ವಲಯ - 24 ರ ಸ್ಫೂರ್ತಿ ಸಮ್ಮೇಳನವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.
ಹರಪನಹಳ್ಳಿ ಜೆಸಿಐ ಸ್ಫೂರ್ತಿ ತಂಡ‌‌ವು ದಾವಣಗೆರೆಯ ಬಂಟರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ ( ಜೆಸಿಐ) ವಲಯ - 24 ರ ಸ್ಫೂರ್ತಿ ಸಮ್ಮೇಳನವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.   

ದಾವಣಗೆರೆ: ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ ಜೆಸಿಐ ಮಾದರಿ ಸಂಘಟನೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.

ಹರಪನಹಳ್ಳಿ ಜೆಸಿಐ ಸ್ಫೂರ್ತಿ ತಂಡ‌‌ವು ನಗರದ ಬಂಟರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ ( ಜೆಸಿಐ) ವಲಯ - 24 ರ ಸ್ಫೂರ್ತಿ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾಷಣ ಕಲೆಯಿಂದ ಹಿಡಿದು ಎಲ್ಲ ನಾಯಕತ್ವದ ತರಬೇತಿಗಳನ್ನು ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಜೆಸಿಐ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ADVERTISEMENT

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿದರು.‌ ಶಿವಮೊಗ್ಗದ ಶಾರದಾ‌ ಶೇಷಗಿರಿಗೌಡ ಅವರಿಗೆ ಕಮಲಪತ್ರ ಅವಾರ್ಡ್ ನೀಡಲಾಯಿತು.

ವಲಯ ಅಧ್ಯಕ್ಷ ಪಿ.ಶಿವಕುಮಾರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಚುನಾವಣೆ ಅಧಿಕಾರಿ ರೇಖೇಶ್‌ ಶರ್ಮ, ನಾಮಿನೆಷನ್ ಸಮಿತಿ ಚೇರ್ಮನ್ ವಿನಾಯಕ ಅರೆಮನೆ, ಎಸ್ಎಂಎ ಅಧ್ಯಕ್ಷೆ ಎಂ.ಎಸ್. ಅಲ್ಕಾನಂದ, ಕಾಂಗ್ರೆಸ್ ಮುಖಂಡ ದೀನೆಶ್ ಶೆಟ್ಟಿ ಇತರರಿದ್ದರು.‌

ಸಮ್ಮೇಳನ ಉದ್ಘಾಟನೆಗೂ ಮುನ್ನ ನಡೆದ ವಲಯದ ಸಾಮಾನ್ಯ ಸಭೆ‌‌ಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಕನಸುಗಳು ಸಾಕಾರಗೊಳ್ಳಲು, ಯಶಸ್ಸಿನ ಮೆಟ್ಟಿಲು ತಲುಪಲು ಸಾಧಕರ ಸಾಧನೆಗಳನ್ನು ಅನುಕರಿಸಬೇಕು. ಸದೃಢ ಸಮಾಜ ನಿರ್ಮಾಣ ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಸಾಲು ಮರದ ತಿಮ್ಮಕ್ಕ, ಅಬ್ದುಕ್ ಕಲಾಂ, ಹರೇಕಲ್ ಹಾಜಬ್ಬ, ಎಂ.ಎಸ್.ಸುಬ್ಬಲಕ್ಷ್ಮಿ ರಂತಹ ಸಾಧನೆಗಳು, ಯಶಸ್ವಿ ಮತ್ತು ಆದರ್ಶ ಪ್ರಜೆಗಳಾಗಲು ಸ್ಪೂರ್ತಿ ನೀಡುತ್ತವೆ ಎಂದು ರಾಷ್ಟ್ರೀಯ ತರಬೇತುದಾರ ಕೆ. ರಾಜೇಂದ್ರ ಭಟ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.