ADVERTISEMENT

ಮೈಸೂರಿನ ಅತ್ಯಾಚಾರದ ಬಗ್ಗೆ ನನ್ನನ್ನು ಏಕೆ ಕೇಳುತ್ತೀರಿ: ಸಿದ್ದೇಶ್ವರ ಪ್ರಶ್ನೆ

ಅದರ ಬಗ್ಗೆ ನನ್ನೇಕೆ ಕೇಳುತ್ತೀರಿ ಎಂದು ಮಾಧ್ಯಮದವರಿಗೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 12:54 IST
Last Updated 27 ಆಗಸ್ಟ್ 2021, 12:54 IST
ಸಂಸದ ಜಿ.ಎಂ ಸಿದ್ದೇಶ್ವರ
ಸಂಸದ ಜಿ.ಎಂ ಸಿದ್ದೇಶ್ವರ    

ದಾವಣಗೆರೆ: ‘ಮೈಸೂರಿನಲ್ಲಿ ಅತ್ಯಾಚಾರ ನಡೆದರೆನನಗೆ ಏಕೆ ಕೇಳ್ತೀರಾ. ಅದನ್ನು ನಾನು ನೋಡಿಲ್ಲ. ಅಲ್ಲಿ ಅತ್ಯಾಚಾರ ನಡೆದಿರುವುದು ನನಗೆ ಗೊತ್ತಿಲ್ಲ’ ಎಂದು ದಾವಣಗೆರೆ ಸಂಸದ ಜಿ.ಎಂ.‌ ಸಿದ್ದೇಶ್ವರ ಪ್ರತಿಕ್ರಿಯಿಸಿದರು.

‘ನಾನು ಬೆಳಿಗ್ಗೆಯಿಂದ ಸಂಜೆಯವರೆಗೆ ಬ್ಯುಸಿ ಇರುತ್ತೇನೆ‌. ಮನೆಗೆ ಬರುವ ವೇಳೆಗೆ ರಾತ್ರಿ 11 ಆಗುತ್ತೆ, ಪತ್ರಿಕೆಗಳನ್ನು ಓದಲು ಆಗುವುದಿಲ್ಲ. ಬೇರೆ ವಿಚಾರದ ಬಗ್ಗೆ ಏನು ಗೊತ್ತಾಗಲ್ಲ. ನೀವು ಏನೇನೋ ಬಿತ್ತರಿಸುತ್ತೀರಾ. ಅದನ್ನೆಲ್ಲಾ ನೋಡಲು ಆಗುತ್ತಾ’ ಎಂದು ದಾವಣಗೆರೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

‘ಜಿಲ್ಲೆಗೆ ಸಂಬಂಧಿಸಿದಂತೆ ಏನಾದರೂ ಇದ್ದರೆ ಕೇಳಿ. ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೇಳ್ತೇನೆ. ಅದನ್ನು ಬಿಟ್ಟು ಎಲ್ಲೆಲ್ಲಿಯದ್ದೋ ಕೇಳಿದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.