ADVERTISEMENT

ದಾವಣಗೆರೆ: ಶ್ರಾವಣ ಶನಿವಾರ ವಿಶೇಷ ಪೂಜೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 5:03 IST
Last Updated 27 ಜುಲೈ 2025, 5:03 IST
ಮಲೇಬೆನ್ನೂರು ಸಮೀಪದ ಹರಳಹಳ್ಳಿ ಆಂಜನೇಯ ಸ್ವಾಮಿಗೆ ಶ್ರಾವಣ ಮಾಸದ ಮೊದಲ ಶನಿವಾರ ವಿಶೇಷ ಅಲಂಕಾರ ಮಾಡಿದ್ದರು
ಮಲೇಬೆನ್ನೂರು ಸಮೀಪದ ಹರಳಹಳ್ಳಿ ಆಂಜನೇಯ ಸ್ವಾಮಿಗೆ ಶ್ರಾವಣ ಮಾಸದ ಮೊದಲ ಶನಿವಾರ ವಿಶೇಷ ಅಲಂಕಾರ ಮಾಡಿದ್ದರು   

ಮಲೇಬೆನ್ನೂರು: ಶ್ರಾವಣ ಶನಿವಾರದ ಪ್ರಯುಕ್ತ ಹೋಬಳಿ ವ್ಯಾಪ್ತಿಯ ವಿವಿಧ ಹನುಮ ಹಾಗೂ ರಂಗನಾಥ ಸ್ವಾಮಿ ದೇಗುಲಗಳಲ್ಲಿ ಶನಿವಾರ ವಿಶೇಷ ಪೂಜೆ ಮಾಡಲಾಗಿತ್ತು. ಭಕ್ತರು ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.

ಕೊಮಾರನಹಳ್ಳಿ, ಹರಳಹಳ್ಳಿ, ಕುಂಬಳೂರು, ಕುಣಿಬೆಳಕೆರೆ, ಜಿಗಳಿ, ಆದಾಪುರದ ಆಂಜನೇಯ, ರಂಗನಾಥ ಸ್ವಾಮಿ ದೇವಾಲಯಗಳು, ಆಂಧ್ರಾ ಕ್ಯಾಂಪ್‌, ವಿನಾಯಕ ನಗರ, ಮಲ್ಲನಾಯಕನಹಳ್ಳಿ, ಭಾಸ್ಕರ್‌ ರಾವ್‌ ಕ್ಯಾಂಪಿನ ಸೀತಾರಾಮ, ಕೋದಂಡರಾಮ ದೇವಾಲಯವನ್ನು ತಳಿರು ತೋರಣಗಳಿಂದ ಶೃಂಗರಿಸಿ, ಪುಷ್ಪಾಲಂಕಾರ, ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ದೇವಾಲಯಗಳ ಮೂಲ ವಿಗ್ರಹಕ್ಕೆ ಪಂಚಾಮೃತ, ಜಲಾಭಿಷೇಕ, ವಿಶೇಷ ಅಲಂಕಾರ ಮಾಡಿದ್ದರು.

ADVERTISEMENT

ಭಕ್ತರು ಹಾಗೂ ಶ್ವೇತ ವಸ್ತ್ರಧಾರಿ ದಾಸ ಸಮೂಹದವರು ದೇವಾಲಯದ ಮುಂಭಾಗದಲ್ಲಿ ನಿಂತು ಜಾಗಟೆ ಬಾರಿ ಶಂಖ ಊದಿ ಹರಕೆ ಸಮರ್ಪಿಸಿದರು. ಭಕ್ತ ಸಮೂಹ ಎಳ್ಳುಗಂಟಿನ ದೀಪ ಹಚ್ಚಿದ್ದರು.

ಕೆಲವೆಡೆ ದಾನಿಗಳ ಸಹಕಾರದಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಮಲೇಬೆನ್ನೂರು ಸಮೀಪದ ಜಿಗಳಿ ಗ್ರಾಮದರಂಗನಾಥ ಸ್ವಾಮಿಗೆ  ಶ್ರಾವಣ ಮಾಸದ ಮೊದಲ ಶನಿವಾರ ವಿಶೇಷ ಅಲಂಕಾರ ಮಾಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.