ದಾವಣಗೆರೆಯಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಯುವಜನೋತ್ಸವ ಅಂಗವಾಗಿ ಆಯೋಜಿಸಿದ್ದ ಕಲಾ ತಂಡಗಳ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳ ಕಲಾವಿದರು ಗಮನ ಸೆಳೆದರು –
ಪ್ರಜಾವಾಣಿ ಚಿತ್ರ : ಸತೀಶ್ ಬಡಿಗೇರ
ದಾವಣಗೆರೆ: ಭಾನುವಾರದಿಂದ ಎರಡು ದಿನ ಇಲ್ಲಿ ನಡೆದ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಸೋಮವಾರ ತೆರೆಬಿದ್ದಿದೆ. ಒಟ್ಟು ಏಳು ವಿಭಾಗಗಳಲ್ಲಿ ನಡೆದ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ದೆಹಲಿಯಲ್ಲಿ ಆಯೋಜಿಸಲಾಗುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಥಮ ₹ 25,000, ದ್ವಿತೀಯ ₹ 15,000 ಹಾಗೂ ತೃತೀಯ ಸ್ಥಾನಕ್ಕೆ ₹ 10,000 ನಗದು ಬಹುಮಾನ ನೀಡಲಾಯಿತು. ವಿವರ ಕೆಳಕಂಡಂತಿದೆ.
ಜನಪದ ಗೀತೆ: ಮಂಡ್ಯ (ಪ್ರಥಮ), ಬಾಗಲಕೋಟೆ (ದ್ವಿತೀಯ), ಚಾಮರಾಜನಗರ (ತೃತೀಯ)
ಜನಪದ ನೃತ್ಯ: ಮಂಡ್ಯ (ಪ್ರಥಮ), ಉಡುಪಿ (ದ್ವಿತೀಯ), ಬಾಗಲಕೋಟೆ (ತೃತೀಯ)
ಕವನ ರಚನೆ: ಬೆಳಗಾವಿಯ ಶಾಂಭವಿ ಕುಶಪ್ಪ ತೇರ್ಲಿ (ಪ್ರಥಮ), ಹಾಸನದ ಶ್ರುತಿ ಎಸ್.ರಾಜ್ (ದ್ವಿತೀಯ), ಉತ್ತರ ಕನ್ನಡದ ಅಸ್ಪಿಯಾ ಇರ್ಶಾದ್ ಅಹಮದ್ ಶೇಕ್ (ತೃತೀಯ)
ಕಥೆ ರಚನೆ: ಹಾಸನದ ತೀರ್ಥ ಪೂವಯ್ಯ (ಪ್ರಥಮ), ಚಿಕ್ಕಮಗಳೂರಿನ ಎಸ್.ಗಗನ್ (ದ್ವಿತೀಯ), ರಾಮನಗರದ ಜಿ.ಕೆ.ರವಿಕುಮಾರ್ (ತೃತೀಯ)
ಚಿತ್ರಕಲೆ: ಗದಗದ ವಿನುತ ಎನ್.ಅಕ್ಕಸಾಲಿಗ (ಪ್ರಥಮ), ದಾವಣಗೆರೆಯ ಕಾರ್ತಿಕ್ ಆಲೂರು (ದ್ವಿತೀಯ), ಉತ್ತರ ಕನ್ನಡದ ಪ್ರಶಾಂತ ಬಾರುಗೌಡ (ತೃತೀಯ)
ಘೋಷಣೆ ಸ್ಪರ್ಧೆ: ಬೆಂಗಳೂರು ನಗರ ಜಿಲ್ಲೆಯ ಚಂದನ್ ಎಂ.ನಾಯ್ಕ (ಪ್ರಥಮ), ಚಿಕ್ಕಮಗಳೂರಿನ ವರುಣ್ ಡಿ.ಆರ್ಯ (ದ್ವಿತೀಯ), ಹಾಸನದ ದೇಶರಾಜ್ ಪರಿಪೂರ್ಣ (ತೃತೀಯ)
ವಿಜ್ಞಾನ ವಸ್ತುಪ್ರದರ್ಶನ: ಬಳ್ಳಾರಿಯ ಜೆ.ಎನ್.ಹರ್ಷ ಮತ್ತು ತಂಡ (ಪ್ರಥಮ), ಮಡಿಕೇರಿ ಶ್ವೇತಾನ್.ಜಿ.ರಾಯ್ (ದ್ವಿತೀಯ), ದಾವಣಗೆರೆಯ ವಿ.ಜೆ.ಜೀವನ (ತೃತೀಯ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.