ADVERTISEMENT

ದಾವಣಗೆರೆ: ಚಹಾ ಮಾರಾಟ ಮಾಡಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 6:55 IST
Last Updated 5 ಅಕ್ಟೋಬರ್ 2021, 6:55 IST
ಐದು ತಿಂಗಳಿಂದ ಬಾಕಿ ಇರುವ ಶಿಷ್ಯವೇತನ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ದಾವಣಗೆರೆ ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಸೋಮವಾರ ಚಹಾ ಮಾರಾಟ ಮಾಡಿ, ಪಿಪಿಇ ಕಿಟ್ ಧರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಡಾ.ಹೇಮಂತ್, ಅವಿನ್, ಸುಬ್ರಹ್ಮಣ್ಯಂ, ರಕ್ಷಾ ಇದ್ದರು.
ಐದು ತಿಂಗಳಿಂದ ಬಾಕಿ ಇರುವ ಶಿಷ್ಯವೇತನ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ದಾವಣಗೆರೆ ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಸೋಮವಾರ ಚಹಾ ಮಾರಾಟ ಮಾಡಿ, ಪಿಪಿಇ ಕಿಟ್ ಧರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಡಾ.ಹೇಮಂತ್, ಅವಿನ್, ಸುಬ್ರಹ್ಮಣ್ಯಂ, ರಕ್ಷಾ ಇದ್ದರು.   

ದಾವಣಗೆರೆ: ಐದು ತಿಂಗಳಿಂದ ಬಾಕಿ ಇರುವ ಶಿಷ್ಯವೇತನ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನ ಗೃಹವೈದ್ಯರು ಸೋಮವಾರ ಚಹಾ ಮಾರಾಟ ಮಾಡಿ, ಪಿಪಿಇ ಕಿಟ್ ಧರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು, ‘ಸುಧಾರಿಸಿತು ಕೋವಿಡ್ ಅಲೆ, ಆದರೆ ವೈದ್ಯರಿಗೇಕೆ ಇಲ್ಲ ಇನ್ನೂ ಬೆಲೆ’, ‘ರಾತ್ರಿಯೆಲ್ಲ ನಿದ್ದೆಯಿಲ್ಲ, ಜೇಬಲ್ಲಿ ದುಡ್ಡಿಲ್ಲ’ ಇತ್ಯಾದಿ ಬರಹಗಳುಳ್ಳ ಭಿತ್ತಿಪತ್ರಗಳನ್ನು ಹಿಡಿದು ತಮ್ಮ ಬೇಡಿಕೆಗಳ ಬಗ್ಗೆ ಘೋಷಣೆಗಳನ್ನು ಕೂಗಿದರು.

ಹತ್ತು ಜನ ಕಿರಿಯ ವೈದ್ಯರು ಪಿಪಿಇ ಕಿಟ್ ಧರಿಸಿ 8 ಗಂಟೆಗಳ ಕಾಲ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಸಾರ್ವಜನಿಕರಿಗೆ ಚಹಾ ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಬಡವರಿಗೆ ಊಟ ನೀಡಿದರು. ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.

ADVERTISEMENT

ಗೃಹ ವೈದ್ಯರಾದ ಡಾ.ಹೇಮಂತ್, ಅವಿನ್, ಸುಬ್ರಹ್ಮಣ್ಯಂ, ರಕ್ಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.