ADVERTISEMENT

ಮಗನ ಜೊತೆಗೆ ಸೇರಿ ಪತ್ನಿಯನ್ನೇ ಕೊಂದ ಪತಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 6:31 IST
Last Updated 22 ಫೆಬ್ರುವರಿ 2021, 6:31 IST

ದಾವಣಗೆರೆ: ತಾಲ್ಲೂಕಿನ ಕಬ್ಬೂರು ಗ್ರಾಮದಲ್ಲಿ ಹಣ ಹಾಗೂ ಆಸ್ತಿಯ ವಿಚಾರವಾಗಿ ಪತಿ ತನ್ನ ಮಗನೊಂದಿಗೆ ಸೇರಿ ಪತ್ನಿಯನ್ನೇ ಕೊಲೆ ಮಾಡಿದ್ದು ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಸಿದ್ದಮ್ಮ (35) ಕೊಲೆಯಾದ ಮಹಿಳೆ. ಈಕೆಯ ಪತಿ ಕಬ್ಬೂರು ಗ್ರಾಮದ ಕೆಂಚವೀರಪ್ಪ, ಮಗ ವಿಕಾಸ್, ಮೃತಳ ಮಾವ ಶೇಖರಪ್ಪ ಹಾಗೂ ರಾಜಪ್ಪ ಅಲಿಯಾಸ್ ನಾಗರಾಜಪ್ಪ ಬಂಧಿತರು. ಫೆ.17ರಂದುಹಳೇ ಬಿಸ್ಲೇರಿ ಗ್ರಾಮದ ಚಾನಲ್‌ನಲ್ಲಿ ಸಿದ್ದಮ್ಮಳ ಶವ ಪತ್ತೆಯಾಗಿದ್ದು, ತಲೆ ಹಾಗೂ ಮುಖದ ಮೇಲೆ ಗಾಯಗಳಾಗಿದ್ದವು. ಈ ಕುರಿತು ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅನುಮಾಗೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಪತಿ ಪತ್ನಿಯರ ಮಧ್ಯೆ ಆಸ್ತಿ ಹಾಗೂ ಹಣದ ವಿಚಾರವಾಗಿ ವೈಮನಸ್ಸು ಇತ್ತು. ಸಿದ್ದವೀರಪ್ಪ ದ್ವಿತೀಯ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದ ತನ್ನ ಮಗ ವಿಕಾಸ್, ಮಾವ ರಾಜಪ್ಪ ಹಾಗೂ ಶೇಖರಪ್ಪ ಅವರ ಸಹಾಯದೊಂದಿಗೆ ಚಾನಲ್ ಬಳಿ ಸಿದ್ದಮ್ಮನನ್ನು ಕರೆಸಿಕೊಂಡು ಹಲ್ಲೆ ಮಾಡಿ ಕೊಂದ ವಿಷಯ ಗೊತ್ತಾಗಿದೆ. ಹೆಣವನ್ನು ಚಾನೆಲ್‌ಗೆ ಎಸೆದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ತನಿಖೆಗಾಗಿ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸಿಪಿಐ ಮಂಜುನಾಥ್, ಹದಡಿ ಪಿಎಸ್‌ಐ ಪ್ರಸಾದ್, ಎ.ಎಸ್ಐ ಚನ್ನವೀರಪ್ಪ ಸಿಬ್ಬಂದಿ ಮಂಜುನಾಥ, ಕರಿಬಸಪ್ಪ ಶಿವಕುಮಾರ್, ವೀರಭದ್ರಪ್ಪ, ಅಣ್ಣಯ್ಯ, ಶ್ರೀನಿವಾಸ್ ತಂಡದಲ್ಲಿ ಇದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್ ಬಹುಮಾನ ಘೋಷಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.