ADVERTISEMENT

ಸಾವಿನಲ್ಲೂ ಒಂದಾದ ದಂಪತಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2023, 2:57 IST
Last Updated 29 ಸೆಪ್ಟೆಂಬರ್ 2023, 2:57 IST
ಭೀಮಾನಾಯ್ಕ, ಪಾರ್ವತಿ ಬಾಯಿ
ಭೀಮಾನಾಯ್ಕ, ಪಾರ್ವತಿ ಬಾಯಿ   

ತ್ಯಾವಣಿಗೆ: ಸಮೀಪದ ಕಾರಿಗನೂರು ಗ್ರಾಮದಲ್ಲಿ ದಂಪತಿ ಸಾವಿನಲ್ಲೂ ಒಂದಾಗಿ ಪ್ರೀತಿ ಮೆರೆದಿದ್ದಾರೆ.

ಗ್ರಾಮದ ಭೀಮಾನಾಯ್ಕ (65)  ಐದು ವರ್ಷಗಳಿಂದ ಪಾಶ್ವುವಾಯು ರೋಗದಿಂದ ಬಳಲುತ್ತಿದ್ದರು. ಸೋಮವಾರ ಸಂಜೆ 4ಕ್ಕೆ ಮೃತಪಟ್ಟಿದ್ದರು. ಆ ಆಘಾತದಿಂದ ಅವರ ಪತ್ನಿ ಪಾರ್ವತಿ ಬಾಯಿಯೂ ರಾತ್ರಿ 7ಕ್ಕೆ ನಿಧನರಾದರು.

ಪಾರ್ವತಿ ಭಾಯಿ 15 ದಿನಗಳ ಹಿಂದೆ ಕಾಲು ಜಾರಿ ಬಿದ್ದಿದ್ದು, ನೋವಿನಿಂದ ಬಳಲುತ್ತಿದ್ದರು. ಇಬ್ಬರ ಪಾರ್ಥಿವ ಶರೀರವನ್ನು ದರ್ಶನಕ್ಕೆ ಇಟ್ಟು, ಮಂಗಳವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.