ADVERTISEMENT

ಪ್ರಯಾಣಿಕರ ದಟ್ಟಣೆ: ಬೆಂಗಳೂರಿನಿಂದ ಕಾರವಾರ, ಬೆಳಗಾವಿಗೆ ತತ್ಕಾಲ್‌ ರೈಲು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 14:35 IST
Last Updated 13 ಏಪ್ರಿಲ್ 2019, 14:35 IST
   

ಹುಬ್ಬಳ್ಳಿ: ಪ್ರಯಾಣಿಕರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆಯು ಯಶವಂತಪುರ–ಕಾರವಾರ ಹಾಗೂ ಯಶವಂತಪುರ–ಬೆಳಗಾವಿ ಮಧ್ಯೆ ವಿಶೇಷ ತತ್ಕಾಲ್‌ ರೈಲು ಓಡಿಸಲಿದೆ.

17ರಂದು ರಾತ್ರಿ 10ಕ್ಕೆ ಯಶವಂತಪುರದಿಂದ ಹೊರಡುವ ರೈಲು (06557–06558) 18ರಂದು ಮಧ್ಯಾಹ್ನ 3.30ಕ್ಕೆ ಕಾರವಾರ ತಲುಪಲಿದೆ.

ಯಶವಂತಪುರ–ಬೆಳಗಾವಿ: ಏ 18ರಂದು ರಾತ್ರಿ 11ಕ್ಕೆ ಯಶವಂತಪುರದಿಂದ ಹೊರಡುವ ರೈಲು (06581–06582) 19ರಂದು ಬೆಳಿಗ್ಗೆ 11.15ಕ್ಕೆ ಬೆಳಗಾವಿ ತಲುಪಲಿದೆ.

ADVERTISEMENT

22ರಂದು ಯಶವಂತಪುರದಿಂದ ರಾತ್ರಿ 11ಕ್ಕೆ ಹೊರಡುವ ಮತ್ತೊಂದು ರೈಲು (06583–06584) ಮರುದಿನ ಬೆಳಿಗ್ಗೆ 11.15ಕ್ಕೆ ಬೆಳಗಾವಿ ತಲುಪಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.