ನವಲಗುಂದ: ಅಜಾತ ನಾಗಲಿಂಗಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶಾಸಕ ಎನ್.ಎಚ್. ಕೋನರಡ್ಡಿ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಹೊರ ವಲಯದಲ್ಲಿರುವ ವಾಲ್ಮೀಕಿ ಭವನದ ಎದುರಿಗೆ ಜೋಡಿ ಎತ್ತುಗಳ ಚಕ್ಕಡಿ ಓಡಿಸುವ ಸ್ಪರ್ಧೆ ನಡೆಯಿತು.
ಕೋನರಡ್ಡಿ ಅವರು ಸ್ಪರ್ಧೆಗೆ ಚಾಲನೆ ನೀಡಿ, ‘ಮುಂಗಾರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದರಿಂದ ರೈತರಿಗೆ ಹಾನಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದೆ’ ಎಂದರು.
ಸ್ಪರ್ಧೆಯಲ್ಲಿ ಕ್ರಮವಾಗಿ ಮೊದಲ ಐದು ಬಹುಮಾನ ಪಡೆದ ಮೈಲಾರಲಿಂಗೇಶ್ವರ, ಬಸವೇಶ್ವರ ಅಂಬರೇಶ, ಶರಣಬಸವೇಶ್ವರ, ದುರ್ಗಾದೇವಿ, ಕ್ರಾಂತಿವೀರ ಸಾಮ್ರಾಜ್ಯ ಇವರುಗಳಿಗೆ ಬಹುಮಾನ ವಿತರಿಸಿದರು.
ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸ್ಥಾಯಿ ಸಮಿತಿ ಚೇರಮನ್ ಹನಮಂತಪ್ಪ ವಾಲಿಕರ, ಸಿಪಿಐ ರವಿಕುಮಾರ ಕಪ್ಪತ್ತನವರ, ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ ತದ್ದೆವಾಡಿ, ಜೀವನ ಪವಾರ, ನವೀನ ಹೊಸಗೌಡ್ರ, ಪ್ರಕಾಶ ಗೊಂದಳೆ, ಆನಂದ ಹವಳಕೊಡ, ಸ್ಪರ್ಧೆಯ ಸಂಘಟಕರಾದ ಸಿದ್ದಪ್ಪ ಹೂಗಾರ, ಮುತ್ತಪ್ಪ ಹೂಗಾರ, ಉಮೇಶ ದೋಟಿಕಲ್, ಮುತ್ತು ಡಾಲೀನ, ಆನಂದ ಡಾಲೀನ್, ಭೀಮಶಿ ಹೊಸಮನಿ, ಈರಣ್ನ ಹೊಸಮನಿ, ಶಿವಪ್ಪ ಕಟ್ಟಿ, ನಾಗರಾಜ ಹರಿವಾಳದ, ಕುಬೇರ ಡಾಲೀನ್, ನಿಂಗಪ್ಪ ತೋಟಪ್ಪನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.