ADVERTISEMENT

ಎಎಪಿಗೆ ಸೊಪ್ಪಿನ ಗ್ರಾಮೀಣ ಘಟಕದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 13:30 IST
Last Updated 15 ಜನವರಿ 2022, 13:30 IST
ವಿಕಾಸ ಸೊಪ್ಪಿನ
ವಿಕಾಸ ಸೊಪ್ಪಿನ   

ಹುಬ್ಬಳ್ಳಿ: ಆಮ್‌ ಆದ್ಮಿ ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ವಿಕಾಸ ಸೊಪ್ಪಿನ ಅವರನ್ನು ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ರಾಜಕೀಯ ಸಲಹೆಗಾರ ರೊಮಿ ಭಾಟಿ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ ಜೈನ್, ಜಿಲ್ಲಾ ಘಟಕದ ನೂತನ ಅಧ್ಯಕ್ಷ ಅನಂತಕುಮಾರ ಬುಗಡಿ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಬಳಿಕ ಮಾತನಾಡಿದ ರೊಮಿ ಭಾಟಿ ‘ಸೊಪ್ಪಿನ ಅವರು ಗ್ರಾಮೀಣ ಜನರ ಸಮಸ್ಯೆಗಳ ವಿರುದ್ಧ ತಮ್ಮ ಹೋರಾಟ ತೀವ್ರಗತಿಯಲ್ಲಿ ಮುಂದುವರಿಸಿ ಬರುವ ಬೇಸಿಗೆಗಾಲಕ್ಕೂ ಮೊದಲು ಕಳಸಾ ಬಂಡೂರಿ ಯೋಜನೆ ಕಾರ್ಯಾರಂಭಕ್ಕೆ ಪ್ರಯತ್ನಿಸಬೇಕು’ ಎಂದರು.

ADVERTISEMENT

ಪಕ್ಷದ ಪ್ರಮುಖರಾದ ಶಶಿಕುಮಾರ ಸುಳ್ಳದ, ಪ್ರವೀಣ ಕುಮಾರ ನಡಕಟ್ಟಿಣ, ಮಲ್ಲಪ್ಪ ತಡಸದ, ಸಂತೋಷ ಮಾನೆ, ಮಲ್ಲಿಕಾರ್ಜುನಯ್ಯ ಹಿರೇಮಠ, ಸದಾನಂದ ಹೊಳೆಣ್ಣವರ, ಹಸನಸಾಬ ಇನಾಮದಾರ, ಶಿವಕುಮಾರ ಬಾಗಲಕೋಟ, ಮಹಬೂಬ ಹೊಸಮನಿ, ಡೇನಿಯಲ್ ಐಕೋಸ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.