ADVERTISEMENT

ಗ್ರಾಪಂ ಸದಸ್ಯನ ಪತ್ನಿ ಆತ್ಮಹತ್ಯೆ: ಮೈದುನ ಸೇರಿ ಕುಟುಂಬದ ನಾಲ್ವರ ವಿರುದ್ಧ ಕೇಸ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 6:43 IST
Last Updated 29 ಸೆಪ್ಟೆಂಬರ್ 2022, 6:43 IST
   

ಹುಬ್ಬಳ್ಳಿ: ಮೂರು ತಿಂಗಳ ಹಿಂದೆ ಕೊಲೆಯಾಗಿದ್ದ ರಾಯನಾಳ ಗ್ರಾಮ ಪಂಚಾಯಿತಿ ಸದಸ್ಯ ದೀಪಕ ಪಟದಾರಿ ಪತ್ನಿ ಪುಷ್ಪಾ ಪಟದಾರಿ ಆತ್ಮಹತ್ಯೆಗೆ ಸಂಬಂಧಿಸಿದಂತೆ, ಅವರ ಮೈದುನ ಸೇರಿ ನಾಲ್ವರ ವಿರುಧ್ಧ ನವನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ನವನಗರದ ಸಿಟಿ ಪಾರ್ಕ್ ನ ಸಂಜಯ ಪಟದಾರಿ, ರೇಣುಕಾ ಚವಾಣ, ಶಿವಾಜಿ ಪಟದಾರಿ ಹಾಗೂ ಶಕುಂತಲಾ ಪಟದಾರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳು ಪುಷ್ಪಾ ಅವರಿಗೆ, 'ನೀನು ಎಲ್ಲಿಯಾದರೂ ಹೋಗಿ ಸಾಯಿ. ನಿನ್ನ ಗಂಡನೊಂದಿಗೆ ನೀನು ಸಾಯಬೇಕಿತ್ತು. ಈಗ, ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ನಾವೇ ಸಾಕಬೇಕು' ಎಂದು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಪುಷ್ಪಾ ಅವರ ತಂದೆ ಬಸಪ್ಪ ಮುದಲಿಂಗಣ್ಣವರ ದೂರು‌ ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.