ADVERTISEMENT

ಕನ್ನಡ ಸಿನಿಮಾ ಪ್ರೋತ್ಸಾಹಿಸಿ: ಸಂಸದ ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:45 IST
Last Updated 9 ಜನವರಿ 2026, 7:45 IST
ಧಾರವಾಡದ ಕೆಸಿಡಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್‌ ಪಾಲ್ಗೊಂಡಿದ್ದರು
ಧಾರವಾಡದ ಕೆಸಿಡಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್‌ ಪಾಲ್ಗೊಂಡಿದ್ದರು   

ಧಾರವಾಡ: ಕನ್ನಡ ಸಿನಿಮಾಗಳು ಜಗತ್ತಿನಲ್ಲಿ‌ ಹೆಸರು ಮಾಡುತ್ತಿವೆ.ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರು ಪ್ರೋತ್ಸಾಹ ನೀಡಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಕರ್ನಾಟಕ ಕಾಲೇಜು (ಕೆಸಿಡಿ) ಮೈದಾನದಲ್ಲಿ ಗುರುವಾರ ನಡೆದ ‘ಲ್ಯಾಂಡ್ ಲಾರ್ಡ್‌’ ಸಿನಿಮಾ ಟೀಸರ್ ಹಾಗೂ ರೋಮಾಂಚಕ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಲ್ಯಾಂಡ್ ಲಾರ್ಡ್‌’ ಸಿನಿಮಾ ಈ ನೆಲದ ಕಥೆಯಾಗಿದ್ದು, ಜ.23 ರಂದು ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಬೇಕು ಎಂದರು.

ADVERTISEMENT
ಧಾರವಾಡದ ಕೆಸಿಡಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್‌ ಪಾಲ್ಗೊಂಡಿದ್ದರು

ಲ್ಯಾಂಡ್ ಲಾರ್ಡ್ ಸಿನೆಮಾದ ನಿರ್ದೇಶಕರು ಧಾರವಾಡದವರೇ. ನಿರ್ಮಾಪಕರು ಉತ್ತರ ಕರ್ನಾಟಕ ಜನರು ಎಂದರು.

ನಟಿ ರಚಿತಾ ರಾಮ್‌ ಮಾತನಾಡಿ, ಧಾರವಾಡ ಜನರ ಪ್ರೀತಿ ಫೇಡಾದಷ್ಟೆ ರುಚಿಯಾಗಿದೆ. ನಮ್ಮ ಮಣ್ಣಿನ ಸಿನಿಮಾವನ್ನು ಎಲ್ಲರೂ ನೋಡಬೇಕು. ‘ನಿಂಗವ್ವ ನಿಂಗವ್ವ...’ ಹಾಡು ಹಿಟ್ ಆಗಿದೆ ಎಂದರು.

ಧಾರವಾಡದ ಕೆಸಿಡಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್‌ ಪಾಲ್ಗೊಂಡಿದ್ದರು

ನಟಿ ಭಾವನಾ ರಾವ್, ಗಾಯಕಿ ಪೃಥ್ವಿ ಭಟ್ , ಮಾಜಿ ಶಾಸಕಿ ಸೀಮಾ ಮಸೂತಿ, ಗುರುರಾಜ ಹುಣಸೀಮರದ, ನಾಗೇಶ ಕಲಬುರ್ಗಿ ಪಾಲ್ಗೊಂಡಿದ್ದರು.

ಧಾರವಾಡದ ಕೆಸಿಡಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್‌ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.