ADVERTISEMENT

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಟ್ಟಿಹೋಳಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 14:53 IST
Last Updated 22 ಜನವರಿ 2022, 14:53 IST
ಅಳ್ನಾವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬಸವೇಶ ಹಟ್ಟಿಹೋಳಿ ಅವರನ್ನು ಪಟ್ಟಣ ಪಂಚಾಯ್ತಿ ಸದಸ್ಯ ಮಧು ಬಡಸ್ಕರ್ ಹೂ ಹಾರ ಹಾಕಿ ಸನ್ಮಾನಿಸಿದರು
ಅಳ್ನಾವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬಸವೇಶ ಹಟ್ಟಿಹೋಳಿ ಅವರನ್ನು ಪಟ್ಟಣ ಪಂಚಾಯ್ತಿ ಸದಸ್ಯ ಮಧು ಬಡಸ್ಕರ್ ಹೂ ಹಾರ ಹಾಕಿ ಸನ್ಮಾನಿಸಿದರು   

ಅಳ್ನಾವರ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಸವೇಶ ವಿ. ಹಟ್ಟಿಹೊಳಿ ಹಾಗೂ ಉಪಾಧ್ಯಕ್ಷರಾಗಿ ಅರ್ಜುನ ಅಷ್ಟೇಕರ ಶನಿವಾರ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎರಡು ಸ್ಥಾನಕ್ಕೆ ತಲಾ ಒಬ್ಬರಷ್ಟೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿ ವಿ.ಕೆ. ಚಿಕ್ಕಮಠ ನೂತನ ಪದಾಧಿಕಾರಿಗಳ ಆಯ್ಕೆ ಘೋಷಿಸಿದರು. ಈಚೆಗೆ ನಡೆದ ಸಂಘದ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿತ್ತು.

ನಿರ್ದೇಶಕರಾದ ಸೋಮಶೇಖರ ಇನಾಮದಾರ, ನೂರಅಹ್ಮದ್ ಕಿತ್ತೂರ, ಸಿದ್ದಪ್ಪ ಕಿರ್ಲೋಸ್ಕರ್, ಪರಮೇಶ್ವರ ತೇಗೂರ, ಜಗದೀಶ ಮೂಲಿಮನಿ, ನಾರಾಯಣ ಮೋರೆ, ಎಸ್.ಎಚ್. ಲಲಿತಾ, ಕವಿತಾ ಹಸಬಿಮಠ, ಅಧಿಕಾರಿಗಳಾದ ವಿರೂಪಾಕ್ಷಪ್ಪಯ್ಯ ಚಿಕ್ಕಮಠ, ಮಹಾಂತೇಶ ತೇಲಗಾರ, ಕಾರ್ಯದರ್ಶಿ ವಿನಾಯಕ ದುಲಬಾಜಿ, ಹಿರಿಯರಾದ ಮಧು ಬಡಸ್ಕರ್, ಲಿಂಗರಾಜ ಮೂಲಿಮನಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.