ADVERTISEMENT

ಎನ್‌ಸಿಸಿಗೆ ಆಯ್ಕೆ ವೇಳೆ ಹೃದಯಸ್ತಂಭನ: ಧಾರವಾಡ ಐಐಟಿ ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 6:05 IST
Last Updated 26 ಆಗಸ್ಟ್ 2025, 6:05 IST
<div class="paragraphs"><p>ಅಸ್ವಿತ್ವ ಗುಪ್ತ</p></div>

ಅಸ್ವಿತ್ವ ಗುಪ್ತ

   

ಧಾರವಾಡ: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಆವರಣದಲ್ಲಿ ಎನ್‌ಸಿಸಿ ಆಯ್ಕೆ ಪ್ರಕ್ರಿಯೆ ವೇಳೆ ಕುಸಿದುಬಿದ್ದು‌ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿ ಅಸ್ವಿತ್ವ ಗುಪ್ತ (22) ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ. ಬಿಹಾರದ ಶಿವಾನ್ ಜಿಲ್ಲೆಯ ಆಸ್ತಿತ್ವ ಗುಪ್ತ ಅವರು ಐಐಟಿಯ ಎಂ.ಟೆಕ್‌ ವಿದ್ಯಾರ್ಥಿಯಾಗಿದ್ದರು.

‘ಆಗಸ್ಟ್‌ 23ರಂದು ಎನ್‌ಸಿಸಿ ಆಯ್ಕೆ ಪ್ರಕ್ರಿಯೆಯಲ್ಲಿ 43 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಸ್ತಿತ್ವ ಗುಪ್ತ ಒಂದು ಸುತ್ತು ಓಡಿ ಕುಸಿದುಬಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದೆವು. ತಡರಾತ್ರಿ ಹೃದಯ ಸ್ತಂಭನದಿಂದ ಮೃತಪಟ್ಟರು’ ಎಂದು ಐಐಟಿಯ ಪ್ರೊ.ಪ್ರಹ್ಲಾದ ಜೋಶಿ ತಿಳಿಸಿದರು.

ADVERTISEMENT

‘ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಬಿಹಾರಕ್ಕೆ ಒಯ್ಯಲು ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.