ಹುಬ್ಬಳ್ಳಿ: ನಗರದ ಜಗದ್ಗುರು ಮೂರುಸಾವಿರಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಸೋಮವಾರ ಸಂಜೆ ಗುರುಸಿದ್ಧೇಶ್ವರ ಮಹಾರಥೋತ್ಸವ ಆರಂಭವಾಗಿದೆ.
ಮಠದ ಆವರಣದಲ್ಲಿ ಶಾಸಕ ಜಗದೀಶ ಶೆಟ್ಟರ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.
ಮಠದಿಂದ ಆರಂಭವಾಗಿರುವ ರಥೋತ್ಸವ ಸೊರಬದಮಠ ಗಲ್ಲಿವರೆಗೆ ಸಾಗಿ ಮತ್ತೆ ಮಠವನ್ನು ತಲುಪಲಿದೆ.
ನಂತರ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳ ರಜತ ಸಿಂಹಾಸನಾರೋಹಣ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.